ADVERTISEMENT

ಸಿಡಿಲು ಬಡಿದು ಹಸು ಸಾವು

​ಪ್ರಜಾವಾಣಿ ವಾರ್ತೆ
Published 8 ಜುಲೈ 2021, 3:25 IST
Last Updated 8 ಜುಲೈ 2021, 3:25 IST
ಬೇತಮಂಗಲ ಸಮೀಪದ ಅಂಕತಟ್ಟಹಳ್ಳಿಯ ಮುನಿಯಪ್ಪ ಅವರ ಸೀಮೆ ಹಸು ಸಿಡಿಲು ಬಡಿದು ಮೃತಪಟ್ಟಿರುವುದು 
ಬೇತಮಂಗಲ ಸಮೀಪದ ಅಂಕತಟ್ಟಹಳ್ಳಿಯ ಮುನಿಯಪ್ಪ ಅವರ ಸೀಮೆ ಹಸು ಸಿಡಿಲು ಬಡಿದು ಮೃತಪಟ್ಟಿರುವುದು    

ಬೇತಮಂಗಲ: ಇಲ್ಲಿನ ಅಂಕತಟ್ಟಹಳ್ಳಿಯ ರೈತ ಮುನಿಯಪ್ಪ ಅವರಿಗೆ ಸೇರಿದ ಸುಮಾರು ₹ 60 ಸಾವಿರ ಬೆಲೆ ಬಾಳುವ ಸೀಮೆ ಹಸು ಸಿಡಿಲು ಬಡಿದು ಮೃತಪಟ್ಟಿದೆ.

ಮುನಿಯಪ್ಪ ತಮ್ಮ ಮನೆ ಬಳಿಯ ಮರದ ಕೆಳಗೆ ಹಸು ಕಟ್ಟಿದ್ದರು. ಬುಧವಾರ ಮಧ್ಯಾಹ್ನ ಏಕಾಏಕಿಯಾಗಿ ಮಳೆ ಬಂದಿದ್ದು, ಸಿಡಿಲು ಬಡಿದು ಹಸು ಮೃತ‍ಪಟ್ಟಿದೆ.

ಪಶುವೈದ್ಯರಾದ ತ್ರಿಮೂರ್ತಿ ನಾಯಕ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇಲಾಖೆಯಿಂದ ಬರುವಂತಹ ಪರಿಹಾರವನ್ನು ದೊರಕಿಸುವುದಾಗಿ ಭರವಸೆ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.