ಕೆಜಿಎಫ್: ಆಂಡರ್ಸನ್ಪೇಟೆಯ ಹೃದಯಭಾಗದಲ್ಲಿರುವ ಮದ್ಯದ ಅಂಗಡಿಗೆ ಮಂಗಳವಾರ ಮುಂಜಾನೆ ಕನ್ನ ಹಾಕಿದ ಕಳ್ಳರು ಸುಮಾರು ₹90 ಸಾವಿರ ಮೌಲ್ಯದ ಮದ್ಯ ಮತ್ತು ಅಂಗಡಿಯಲ್ಲಿದ್ದ ₹30 ಸಾವಿರ ನಗದನ್ನು ಅಪಹರಿಸಿದ್ದಾರೆ.
ಆಂಡರ್ಸನ್ಪೇಟೆಯ ಲಕ್ಕಿ ಮದ್ಯದ ಅಂಗಡಿಯ ಪಕ್ಕದಲ್ಲಿ ಬೇಕರಿ ಇದೆ. ಬೇಕರಿಯ ಹಿಂಭಾಗದಲ್ಲಿ ಶೀಟಿನ ಮೇಲ್ಛಾವಣಿ ಇದೆ. ಮೇಲ್ಛಾವಣಿ ಕಿತ್ತ ಕಳ್ಳರು ಬೇಕರಿ ಒಳಗೆ ಇಳಿದಿದ್ದಾರೆ. ಅಲ್ಲಿ ಮದ್ಯದ ಅಂಗಡಿಗೆ ಕನ್ನ ಕೊರೆದಿದ್ದಾರೆ. ಉಳಿ ಮತ್ತು ಸುತ್ತಿಗೆಯನ್ನು ಕನ್ನ ಕೊರೆಯಲು ಬಳಸಿದ್ದಾರೆ. ಒಬ್ಬ ವ್ಯಕ್ತಿ ಒಳಗೆ ಹೋಗುವಷ್ಟು ಕನ್ನ ಮಾಡಿದ ಕಳ್ಳರು ಮದ್ಯವನ್ನು ಅಪಹರಣ ಮಾಡಿದ್ದಾರೆ. ಸ್ಥಳಕ್ಕೆ ಡಿವೈಎಸ್ಪಿ ಉಮೇಶ್ ಭೇಟಿ ನೀಡಿದ್ದರು. ಅಬಕಾರಿ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಆಂಡರ್ಸನ್ಪೇಟೆ ಪೊಲೀಸರು ಮಹಜರು
ನಡೆಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.