ಮುಳಬಾಗಿಲು: ತಾಲ್ಲೂಕು ದುಗ್ಗಸಂದ್ರ ಹೋಬಳಿಯ ಗುಜ್ಜನಹಳ್ಳಿಯಲ್ಲಿ 68ನೇ ವರ್ಷದ ಶ್ರೀಪುರಂದರ ತ್ಯಾಗರಾಜರ ಆರಾಧನೆಯನ್ನು ಸಂಗೀತ ಕಲಾವಿದ ಜಿ. ರಾಮರಾವ್ ಅವರ ಜ್ಞಾಪಕಾರ್ಥವಾಗಿ ರಾಮರಾವ್ ಸಂಗೀತ ವೇದಿಕೆಯಲ್ಲಿಫೆ. 21ರಂದು ಏರ್ಪಡಿಸಲಾಗಿದೆ.
ದೇವರನಾಮ ಗೋಷ್ಠಿ ಗಾಯನ, ಸಂಗೀತ, ಹೊಸ ಕೀರ್ತನೆ, ನಾಡಿನ ಹಿರಿಯರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ರಾತ್ರಿಯಿಡೀ ನಡೆಯವ ಕಾರ್ಯಕ್ರಮಕ್ಕೆ ನಾಗರಿಕರು ಆಗಮಿಸಬೇಕು ಎಂದು ಸಂಚಾಲಕ ಜಿ. ಆರ್. ಅಶ್ವಥ್ ಕೋರಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.