
ಪ್ರಜಾವಾಣಿ ವಾರ್ತೆಬಂಧನ
(ಪ್ರಾತಿನಿಧಿಕ ಚಿತ್ರ)
ಶ್ರೀನಿವಾಸಪುರ: ಶ್ರೀನಿವಾಸಪುರದಿಂದ ಮುಳಬಾಗಿಲು ರಸ್ತೆಯ ಯದರೂರು ಬಳಿ ವ್ಹೀಲಿಂಗ್ ಮಾಡುತ್ತಿದ್ದ ಯುವಕರನ್ನು ಶ್ರೀನಿವಾಸಪುರ ಪೊಲೀಸರು ಸೋಮವಾರ ವಶಕ್ಕೆ ಪಡೆದಿದ್ದಾರೆ.
ಭಾನವಾರ ಯದರೂರು ಬಳಿ ಯುವಕರ ಗುಂಪೊಂದು ವ್ಹೀಲಿಂಗ್ ಮಾಡುತ್ತಿರುವುದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತಿತ್ತು. ಇದನ್ನ ಗಮನಿಸಿದ ಶ್ರೀನಿವಾಸಪುರ ಪಿಎಸ್ಐ ಎಚ್.ಜಯರಾಮ್ ಎಎಸ್ಐ ಮುನಿಗುರಪ್ಪ, ಸಿಬ್ಬಂದಿ ಟಿ.ಎ.ನಾಗರಾಜ್, ಎಂ.ಆನಂದ್ ಕುಮಾರ್, ಸಂತೋಷ್ ಕುಮಾರ್, ರಮೇಶ್, ಮುರುಳಿ, ರಾಜೇಶ್ ರಾಜೇಶ್, ಪತ್ರಿಬಸಪ್ಪ ಯುವಕರನ್ನು ಹಾಗೂ ದ್ವಿಚಕ್ರಗಳನ್ನು ವಶಕ್ಕೆ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.