ADVERTISEMENT

ಕೊಪ್ಪಳ | ಅಧಿಕಾರದ ಗದ್ದುಗೆಗೆ ಕಾಂಗ್ರೆಸ್‌ ಪಾದಯಾತ್ರೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2022, 5:34 IST
Last Updated 10 ಜನವರಿ 2022, 5:34 IST
ಗಂಗಾಧರ ಉಪ್ಪಾರ
ಗಂಗಾಧರ ಉಪ್ಪಾರ   

ಕಾರಟಗಿ: ಮೇಕೆದಾಟು ಯೋಜನೆ ಹೆಸರಲ್ಲಿ ಕಾಂಗ್ರೆಸ್ ಪಕ್ಷ ಪಾದಯಾತ್ರೆ ನಡೆಸುತ್ತಿರುವುದರ ಹಿಂದೆ ಭವಿಷ್ಯದಲ್ಲಿ ಅಧಿಕಾರದ ಗದ್ದುಗೆ ಏರುವ ಕನಸು ಹೊಂದಿದೆ. ಪಾದಯಾತ್ರೆಯಂಥಹ ಗಿಮಿಕ್‌ನಿಂದಲೇ ಅಧಿಕಾರದ ಕನಸು ಕಾಣುತ್ತಿರುವುದು ತಿರುಕನ ಕನಸಾಗುವುದು ಎಂದು ಜಾತ್ಯತೀತ ಜನತಾ ದಳದ ತಾಲ್ಲೂಕು ಘಟಕದ ಅಧ್ಯಕ್ಷ ಗಂಗಾಧರ ಉಪ್ಪಾರ ಹೇಳಿದರು.

ಪಟ್ಟಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, 2004 ರಿಂದ 2014ರ ವರೆಗೆ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿತ್ತು. 2013ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು, ರಾಜ್ಯ ಮತ್ತು ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವೇ ಅಧಿಕಾರ ನಡೆಸಿತ್ತು. 2004ರಿಂದ 2006ರ ಅವಧಿಯಲ್ಲಿ ಸಮ್ಮಿಶ್ರ ಸರ್ಕಾರದ 20 ತಿಂಗಳು ಅವಧಿಯಲ್ಲಿ ಧರ್ಮಸಿಂಗ್ ಮುಖ್ಯಮಂತ್ರಿಯಾಗಿದ್ದಾಗಲೂ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು.

ಯೋಜನೆಯ ಬಗ್ಗೆ ಕಳಕಳಿ ಇರದ ಪಕ್ಷಗಳಿಗೆ ಇದೀಗ ಜ್ಞಾನೋದಯವಾಗಿರುವುದು ಸೋಜಿಗದ ಸಂಗತಿಯೇ ಸರಿ. ಅಧಿಕಾರದಲ್ಲಿದ್ದಾಗ ಮೇಕೆದಾಟು ಯೋಜನೆ ಬಗ್ಗೆ ಚಕಾರ ಎತ್ತದೇ, ವಿರೋಧ ಪಕ್ಷವಾದ ಬಳಿಕ ಎಚ್ಚೆತ್ತುಕೊಂಡು ಪಾದಯಾತ್ರೆ ನಡೆಸಿ, ಅಧಿಕಾರ ಪಡೆಯುವ ಕನಸಿನ ಕಾಂಗ್ರೆಸ್‌ಗೆ ಜನರು ಸರಿಯಾದ ಉತ್ತರ ನೀಡುವರು. ಜನತೆಯ ಆಶೋತ್ತರಕ್ಕೆ ಸ್ಪಂದಿಸುವ ಜೆಡಿಎಸ್‌ ಜನರ ಒಲಿವಿದ್ದು, ಅವರು ಬೆಂಬಲಿಸುವರು ಎಂದು ಅವರು ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.