ADVERTISEMENT

ಕೊಪ್ಪಳ | ಕೂಡಿಟ್ಟಿದ್ದ ₹ 3,683 ಅನ್ನು ಪಿಎಂ ಕೇರ್ಸ್‌ಗೆ ನೀಡಿದ ಬಾಲಕಿ

​ಪ್ರಜಾವಾಣಿ ವಾರ್ತೆ
Published 9 ಜೂನ್ 2020, 19:12 IST
Last Updated 9 ಜೂನ್ 2020, 19:12 IST
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಕಲಾಲಬಂಡಿ ಗ್ರಾಮದ ಅನುಸುಪ್ರಿತಾ ಕಲಾಲಬಂಡಿ ಎಂಬ ಬಾಲಕಿ ಮಂಗಳವಾರ ತಾನು ಕೂಡಿಟ್ಟಿದ್ದ ₹3,683 ಹಣವನ್ನು ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಮಂತ್ರಿ ಕೋವಿಡ್‌-19 ಪರಿಹಾರ ನಿಧಿಗೆ ದೇಣಿಗೆ ನೀಡಿದಳು
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಕಲಾಲಬಂಡಿ ಗ್ರಾಮದ ಅನುಸುಪ್ರಿತಾ ಕಲಾಲಬಂಡಿ ಎಂಬ ಬಾಲಕಿ ಮಂಗಳವಾರ ತಾನು ಕೂಡಿಟ್ಟಿದ್ದ ₹3,683 ಹಣವನ್ನು ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಮಂತ್ರಿ ಕೋವಿಡ್‌-19 ಪರಿಹಾರ ನಿಧಿಗೆ ದೇಣಿಗೆ ನೀಡಿದಳು    

ಕೊಪ್ಪಳ: ಕುಷ್ಟಗಿ ತಾಲ್ಲೂಕು ಕಲಾಲಬಂಡಿ ಗ್ರಾಮದ ಬಾಲಕಿ ಅನುಸುಪ್ರಿತಾ ತಾನು ಕೂಡಿಟ್ಟಿದ್ದ ₹3,683 ಅನ್ನು ಪಿಎಂ ಕೇರ್ಸ್‌ ನಿಧಿಗೆ ನೀಡಿದ್ದಾಳೆ.

ಒಂದನೇ ತರಗತಿ ಮುಗಿಸಿರುವ ಏಳು ವರ್ಷದ ಈ ಬಾಲಕಿ, ಪಾಲಕರು ಕೊಡುತ್ತಿದ್ದ ಚಿಲ್ಲರೆ ಹಣವನ್ನು 8 ತಿಂಗಳಿನಿಂದ ಹುಂಡಿಯಲ್ಲಿ ಸಂಗ್ರಹಿಸಿಟ್ಟಿದ್ದಳು.

ಸಂಗ್ರಹಗೊಂಡಿದ್ದ ಒಟ್ಟು ₹3,683 ಹಣವನ್ನು ಚೀಲದಲ್ಲಿ ಹಾಕಿಕೊಂಡು ತನ್ನ ತಂದೆ ಚಂದಾಲಿಂಗ ಕಲಾಲಬಂಡಿ ಅವರೊಂದಿಗೆ ತೆರಳಿ ಜಿಲ್ಲಾಧಿಕಾರಿಪಿ.ಸುನೀಲಕುಮಾರ್‌ ಅವರಿಗೆ ಹಸ್ತಾಂತರಿಸಿದಳು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.