ADVERTISEMENT

ಹನುಮಸಾಗರ | ರಸ್ತೆ ಮೇಲೆ ಮೆಕ್ಕೆಜೋಳ: ಸಂಚಾರಕ್ಕೆ ಅಡಚಣೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2025, 4:41 IST
Last Updated 12 ಅಕ್ಟೋಬರ್ 2025, 4:41 IST
ಹನುಮನಾಳ ಗ್ರಾಮದಲ್ಲಿ ರೈತರು ರಸ್ತೆ ಮಧ್ಯದಲ್ಲಿ ಮೆಕ್ಕೆಜೋಳ ಒಣಗಿಸುತ್ತಿರುವುದು
ಹನುಮನಾಳ ಗ್ರಾಮದಲ್ಲಿ ರೈತರು ರಸ್ತೆ ಮಧ್ಯದಲ್ಲಿ ಮೆಕ್ಕೆಜೋಳ ಒಣಗಿಸುತ್ತಿರುವುದು   

ಹನುಮಸಾಗರ: ಇಲ್ಲಿಗೆ ಸಮೀಪದ ಹನುಮನಾಳ ಗ್ರಾಮದಲ್ಲಿ ರೈತರು ಮೆಕ್ಕೆಜೋಳವನ್ನು ಬಿಸಿಲಿಗೆ ಒಣಗಿಸಲು ಊರಿನ ಮುಖ್ಯ ರಸ್ತೆ ಉಪಯೋಗಿಸುತ್ತಿದ್ದು, ಇದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗಿದೆ.

ಬಾದಾಮಿಯ ಸ್ಮಾರಕಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದೆ. ರಸ್ತೆ ಮಧ್ಯ ಮೆಕ್ಕೆಜೋಳದ ತೆನೆಗಳನ್ನು ಹರಡಲಾ ಗುತ್ತಿದೆ. ಅಲ್ಲಿಯೇ ಲಾರಿಗಳನ್ನು ನಿಲ್ಲಿಸಿ ಜೋಳದ ಚೀಲಗಳನ್ನು ತುಂಬಿಕೊಳ್ಳುತ್ತಿರುವ ದೃಶ್ಯಗಳು ಕಾಣಿಸುತ್ತಿವೆ. ಇದರಿಂದಾಗಿ ವಾಹನಗಳು ಸುಗಮವಾಗಿ ಸಂಚರಿಸಲು ಸಾಧ್ಯವಾಗುತ್ತಿಲ್ಲ. 

‘ರಸ್ತೆ ಮಧ್ಯದಲ್ಲಿ ಜೋಳ ಹರಡಿರುವುದರಿಂದ ಸಂಚಾರ ಕಷ್ಟವಾಗುತ್ತಿದೆ. ವೇಗದಲ್ಲಿ ಬರುವ ವಾಹನಗಳು ನಿಯಂತ್ರಣ ತಪ್ಪುವ ಸಾಧ್ಯತೆ ಇದೆ. ಚಾಲಕರು ಇಲ್ಲಿ ಜೀವ ಭಯದಲ್ಲೇ ಸಾಗುತ್ತಿದ್ದಾರೆ’ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ರೈತರಿಗೆ ರಸ್ತೆ ಬದಲಾಗಿ ಪರ್ಯಾಯ ಸ್ಥಳದಲ್ಲಿ ಮೆಕ್ಕೆಜೋಳ ಒಣಗಿಸಲು ಅವಕಾಶ ಕಲ್ಪಿಸಬೇಕು’ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.