ಕಾರಟಗಿ: ಮಸೀದಿಗಳಲ್ಲಿನ ಆಜಾನ್ಗೆ ಪ್ರತಿಯಾಗಿ ಶ್ರೀರಾಮಸೇನೆ ಮತ್ತು ಬಜರಂಗದಳ ಸಂಘಟನೆಯ ಕಾರ್ಯಕರ್ತರು ಪಟ್ಟಣದ ಕೋಟೆ ಆಂಜನೇಯ ದೇವಸ್ಥಾನದಲ್ಲಿ ಹನುಮಾನ್ ಚಾಲೀಸಾ ಪಠಣ ಮಾಡಿದರು.
ಮುಖಂಡ ಮಂಜುನಾಥ ಮಸ್ಕಿ ಮಾತನಾಡಿ, ಶ್ರೀರಾಮಸೇನೆ ಅಧ್ಯಕ್ಷರ ಆದೇಶದಂತೆ ಹನುಮಾನ್ ಚಾಲೀಸಾ ಪಠಿಸಲಾಯಿತು. ಶೀಘ್ರದಲ್ಲೇ ಧ್ವನಿವರ್ಧಕ ಅಳವಡಿಸಿ, ನಿತ್ಯ ಬೆಳಿಗ್ಗೆ, ಸಂಜೆ ಹನುಮಾನ್ ಚಾಲೀಸಾ ಪಠಿಸಲಾಗುವುದು’ ಎಂದರು.
ಪ್ರಮುಖರಾದ ರಾಜುಗೌಡ ಮಾಲಿಪಾಟೀಲ, ಪ್ರಮುಖರಾದ ಅನೀಲ್ ರಜಪೂತ್, ರಮೇಶ ನಾಯಕ, ಶಿವರಾಜ ನಾಯಕ, ಹನುಮಂತಪ್ಪ ಗುರಿಕಾರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.