ADVERTISEMENT

ನವವೃಂದಾವನ ವಿವಾದ: ಜುಲೈ 5ರ ವರೆಗೆ ಕಾಲಾವಕಾಶ

​ಪ್ರಜಾವಾಣಿ ವಾರ್ತೆ
Published 27 ಜೂನ್ 2022, 15:59 IST
Last Updated 27 ಜೂನ್ 2022, 15:59 IST
ರಾಯರ ಹಾಗೂ ಉತ್ತರಾದಿಮಠಗಳ ಭಕ್ತರ ನಡುವೆ ಸೋಮವಾರ ಸಭೆ ನಡೆಯಿತು.
ರಾಯರ ಹಾಗೂ ಉತ್ತರಾದಿಮಠಗಳ ಭಕ್ತರ ನಡುವೆ ಸೋಮವಾರ ಸಭೆ ನಡೆಯಿತು.   

ಗಂಗಾವತಿ: ನಗರದ ತಹಶೀಲ್ದಾರ್‌ ಕಚೇರಿಯಲ್ಲಿ ತಾಲ್ಲೂಕು ಆಡಳಿತ ವತಿಯಿಂದ ನವವೃಂದಾವನ ಗಡ್ಡೆಯ ವೃಂದಾವನ ವಿವಾದಕ್ಕೆ ಸಂಬಂಧಪಟ್ಟ ರಾಯರ ಹಾಗೂ ಉತ್ತರಾದಿಮಠಗಳ ಭಕ್ತರ ನಡುವೆ ಸೋಮವಾರ ಸಭೆ ನಡೆಯಿತು.

ಕೊಪ್ಪಳ ಉಪವಿಭಾಗಾಧಿಕಾರಿ ಬಸವಣ್ಯಪ್ಪ ಕಲಶೆಟ್ಟಿ ಮಾತನಾಡಿ ‘ಹಲವು ವರ್ಷಗಳ ಇತಿಹಾಸವಿರುವ ನವವೃಂದಾವನ ಗಡ್ಡೆಯಲ್ಲಿ 9 ಯತಿಗಳ ಬೃಂದಾವನಗಳಿದ್ದು, ಈಗ ರಘುವರ್ಯ ತೀರ್ಥರು ಹಾಗೂ ಜಯತೀರ್ಥರು ಎಂಬ ಯತಿಗಳ ಕುರಿತು ವೃಂದಾವನದಲ್ಲಿ ವಿವಾದ ಉಂಟಾಗಿದೆ‘‍ ಎಂದರು.

’ಉತ್ತರಾದಿಮಠ, ರಾಯರಮಠದ ಭಕ್ತರು ಇಬ್ಬರು ಒಂದೇ ಸಮಯದಲ್ಲಿ ಒಂದೇ ವೃಂದಾವನಕ್ಕೆ ಪೂಜೆ, ಆರಾಧನೆ ಮಾಡಲು ನಿರ್ಧಾರ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ. ಎರಡೂ ಮಠಗಳ ಭಕ್ತರು ಹಾಗೂ ವಕೀಲರನ್ನ ಕರೆಯಿಸಿ ಚರ್ಚಿಸಲಾಗುವುದು‘ ಎಂದರು.

ADVERTISEMENT

’ಎರಡು ಮಠದವರು ಸೇರಿ ಒಟ್ಟಿಗೆ ಪೂಜೆ, ಆರಾಧನೆ ಮಾಡುವಂತೆ ಹೇಳಲಾಗುತ್ತಿದ್ದು ಇದಕ್ಕೆ ರಾಯರ ಮಠದವರು ಒಪ್ಪಿದರೆ, ಉತ್ತಾರಾದಿ ಮಠದವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದ್ದರಿಂದ ಜಿಲ್ಲಾಡಳಿತದ ವತಿಯಿಂದ ಒಟ್ಟಿಗೆ ಪೂಜೆ ನಡೆಸುವ ಕುರಿತು ಅಭಿಪ್ರಾಯ ತಿಳಿಸುವಂತೆ ಎರಡೂ ಮಠದವರಿಗೆ ಜು. 5ರ ವರೆಗೆ ಕಾಲಾವಕಾಶ ನೀಡಲಾಗಿದೆ. ಎರಡು ಮಠಗಳ ಮುಖ್ಯಸ್ಥರ ತೀರ್ಮಾನ ನೋಡಿಕೊಂಡು ಜಿಲ್ಲಾಡಳಿತ ಮುಂದಿನ ನಿರ್ಧಾರ ಕೈಗೊಳ್ಳಲಿದೆ’ ಎಂದರು.

ತಹಶೀಲ್ದಾರ್‌ ಯು.ನಾಗರಾಜ, ಗ್ರಾಮೀಣ ಠಾಣೆಯ ಪಿಐ ಮಂಜುನಾಥ ಹಾಗೂ ಸೇರಿದಂತೆ ಎರಡು ಮಠಗಳ ಭಕ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.