ADVERTISEMENT

ಶರಣಬಸಪ್ಪ ಕೊಪ್ಪಳದ ನೂತನ ಡಿವೈಎಸ್‌ಪಿ

​ಪ್ರಜಾವಾಣಿ ವಾರ್ತೆ
Published 19 ಜುಲೈ 2022, 16:15 IST
Last Updated 19 ಜುಲೈ 2022, 16:15 IST

ಕೊಪ್ಪಳ: ಕಲಬುರಗಿಯಲ್ಲಿ ಈಶಾನ್ಯ ವಲಯದ ಪೊಲೀಸ್‌ ಮಹಾ ನಿರೀಕ್ಷಕರ ಕಚೇರಿಯಲ್ಲಿದ್ದ ಡಿವೈಎಸ್‌ಪಿ (ಸಿವಿಲ್‌) ಶರಣಬಸಪ್ಪ ಎಚ್‌. ಸುಬೇದಾರ್‌ ಅವರನ್ನು ಕೊಪ್ಪಳ ಉಪ ವಿಭಾಗಕ್ಕೆ ವರ್ಗಾವಣೆ ಮಾಡಿ ಮಂಗಳವಾರ ಸರ್ಕಾರ ಆದೇಶ ಹೊರಡಿಸಿದೆ.

ಇಲ್ಲಿನ ಉಪ ವಿಭಾಗದ ಡಿವೈಎಸ್‌ಪಿಯಾಗಿದ್ದ ಗೀತಾ ಬೆನಹಾಳ ಅವರನ್ನು ಜು. 1ರಂದು ಕಲಬುರಗಿಗೆ ವರ್ಗಾವಣೆ ಮಾಡಿದ್ದರಿಂದ ಈ ಹುದ್ದೆ ಖಾಲಿ ಉಳಿದಿತ್ತು.

ಜಿಲ್ಲೆಯ ಕೆಲ ಪೊಲೀಸ್‌ ಇನ್‌ಸ್ಟೆಕ್ಟರ್‌ಗಳನ್ನು ವರ್ಗಾವಣೆ ಮಾಡಲಾಗಿದ್ದು, ಇನ್ನೂ ಕೆಲವರನ್ನು ಜಿಲ್ಲೆಗೆ ವರ್ಗ ಮಾಡಲಾಗಿದೆ.

ADVERTISEMENT

ಕೊಪ್ಪಳ ನಗರ ಠಾಣೆಯ ಪೊಲೀಸ್‌ ಇನ್‌ಸ್ಟೆಕ್ಟರ್‌ ಮಾರುತಿ ಎಸ್‌. ಗುಳ್ಳಾರಿ ಅವರನ್ನು ಧಾರವಾಡ ಜಿಲ್ಲೆಯ ಕುಂದಗೋಳ ವೃತ್ತಕ್ಕೆ ವರ್ಗಾವಣೆ ಮಾಡಲಾಗಿದೆ. ಇವರು ಕೊಪ್ಪಳಕ್ಕೆ ಬರುವ ಮೊದಲು ಹಳೇ ಹುಬ್ಬಳ್ಳಿ ಠಾಣೆಯಲ್ಲಿದ್ದರು.

ಕೊಪ್ಪಳ ಸೈಬರ್‌ ಕ್ರೈಂ ಸಿಪಿಐ ಚಂದ್ರಶೇಖರ ಎನ್‌. ಹರಿಹರ ಅವರನ್ನು ರಾಜ್ಯ ಗುಪ್ತವಾರ್ತೆಗೆ ವರ್ಗಾವಣೆ ಮಾಡಲಾಗಿದ್ದು, ಈ ಸ್ಥಳಕ್ಕೆ ಗದಗನಲ್ಲಿ ಹೆಸ್ಕಾಂನಲ್ಲಿ ಜಾಗೃತ ದಳದಲ್ಲಿದ್ದ ಅಮರೇಶ ಹುಬ್ಬಳ್ಳಿ ಅವರನ್ನು ವರ್ಗಾಯಿಸಲಾಗಿದೆ.

ಇಲ್ಲಿನ ಜೆಸ್ಕಾಂ ಜಾಗೃತ ದಳದಲ್ಲಿದ್ದ ಸುರೇಶ ಡಿ. ಅವರನ್ನು ಇಲ್ಲಿಯೇ ಡಿಸಿಆರ್‌ಬಿಗೆ ವರ್ಗಾವಣೆ ಮಾಡಿ ಸರ್ಕಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.