ಕೊಪ್ಪಳ: ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಭಾನಾಪುರ ಪ್ರೌಢಶಾಲೆ ಶಿಕ್ಷಕ ಸೋಮಶೇಖರ್ ಹರ್ತಿ ಆಯ್ಕೆಯಾಗಿದ್ದಾರೆ.
ನಗರದ ಶಾಸಕರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ನಡೆದ ಚುನಾವಣೆಯಲ್ಲಿ ಸೋಮಶೇಖರ್ ಹಾಗೂ ಹೇಮಣ್ಣ ಕವಲೂರು ನಾಮಪತ್ರ ಸಲ್ಲಿಸಿದ್ದರು. ಒಟ್ಟು 45 ಮತಗಳ ಪೈಕಿ ಸೋಮಶೇಖರ್ 34 ಹಾಗೂ ಹೇಮಣ್ಣ 11 ಮತಗಳನ್ನು ಗಳಿಸಿದರು.
ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎಂ.ವಿಠ್ಠಲ್ 36 ಮತಗಳನ್ನು ಪಡೆದು ಜಯಶಾಲಿಯಾದರು. ಶಂಕರಗೌಡ 9 ಮತ ಗಳಿಸಿದರು. ಸಹ ಕಾರ್ಯದರ್ಶಿ ಸ್ಥಾನಕ್ಕೆ ಅರುಂಧತಿ ಹಿರೇಮಠ 35 ಮತಗಳನ್ನು ಪಡೆದರೆ, ಮಲ್ಲಪ್ಪ ಗೋ ಭಂಡಾರಿ ಅವರು 9 ಮತಗಳನ್ನಷ್ಟೇ ಗಳಿಸಿದರು. ಚುನಾವಣಾಧಿಕಾರಿ ಶರಣಪ್ಪ ಬಳಿಗಾರ ಅವರು ಫಲಿತಾಂಶ ಘೋಷಿಸಿದರು.
ಒಟ್ಟು ಆರು ಸ್ಥಾನಗಳ ಪೈಕಿ ಮುನಿರಾಬಾದ್ನ ಮಾರ್ತಾಂಡರಾವ್ ದೇಸಾಯಿ (ಕಾರ್ಯದರ್ಶಿ), ಗಂಗಾವತಿಯ ಈರಣ್ಣ (ಕೋಶಾಧ್ಯಕ್ಷ) ಹಾಗೂ ಗುರಪ್ಪಯ್ಯ (ಸಂಘಟನಾ ಕಾರ್ಯದರ್ಶಿ) ಅವಿರೋಧವಾಗಿ ಆಯ್ಕೆಯಾಗಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.