
ಪ್ರಜಾವಾಣಿ ವಾರ್ತೆಕೊಪ್ಪಳ: ಕೆಲವರು ಅಪರಾಧ ಚಟುವಟಿಕೆಗೆ ಬಳಸಿದ್ದ ಹಣವನ್ನು ವೈಯಕ್ತಿಕಕ್ಕೆ ಬಳಕೆ ಮಾಡಿಕೊಂಡ ಆರೋಪದ ಮೇಲೆ ಜಿಲ್ಲೆಯ ಯಲಬುರ್ಗಾ ಠಾಣೆಯ ಮೂವರು ಪೊಲೀಸರನ್ನು ಅಮಾನತು ಮಾಡಲಾಗಿದೆ.
ಕೆಲವರು ಜೂಜಾಟವಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹಣ ವಶಕ್ಕೆ ಪಡೆದುಕೊಂಡಿದ್ದರು. ಈ ಹಣದ ಬಗ್ಗೆ ನಿಯಮಾನುಸಾರ ಕ್ರಮ ಕೈಗೊಳ್ಳದೆ ವೈಯಕ್ತಿಕಕ್ಕೆ ಬಳಸಿಕೊಂಡಿದ್ದರಿಂದ ಅಮಾನತಿನ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಮೂವರನ್ನು ಅಮಾನತು ಮಾಡಿರುವ ವಿಷಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಖಚಿತಪಡಿಸಿದ್ದಾರೆ.
ಈ ಕುರಿತು ಯಲಬುರ್ಗಾದ ಪೊಲೀಸರೊಬ್ಬರನ್ನು ಪ್ರಶ್ನಿಸಿದಾಗ ’ಅಮಾನತಿನ ಘಟನೆಗಳು ನಡೆದಿಲ್ಲ. ಷೋಕಾಸ್ ನೋಟಿಸ್ ಮಾತ್ರ ನೀಡಲಾಗಿದೆ. ನಿಮಗೆಲ್ಲವೂ ವಿಷಯ ಗೊತ್ತಿರುತ್ತದೆ ಬಿಡಿ’ ಎಂದು ಜಾರಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.