ಕೊಪ್ಪಳದ ಗವಿಸಿದ್ಧೇಶ್ವರ ಮಠದ ಜಾತ್ರಾ ಮಹೋತ್ಸವದಲ್ಲಿ ತರಹೇವಾರಿ ದಾಸೋಹವೇ ವಿಶೇಷ. ಪ್ರತಿವರ್ಷವೂ ಒಂದೊಂದು ರೀತಿಯಲ್ಲಿ ಸಿಹಿ ತಿನಿಸು ಮಾಡುವ ಸಿಂಧನೂರಿನ ಸಮಾನ ಮನಸ್ಕ ಸ್ನೇಹಿತರು, ಮಠದ ಭಕ್ತರಿಗಾಗಿ ಈ ಬಾರಿ ಲಕ್ಷಾಂತರ ಜಿಲೇಬಿಗಳನ್ನು ತಯಾರಿಸಿದ್ದಾರೆ. ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಅವರ ಸಲಹೆ ಮೇರೆಗೆ ಈ ಸಲ ಜಿಲೇಬಿ ಮಾಡಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.