ADVERTISEMENT

ಯಲಬುರ್ಗಾ: ಬ್ಯಾಂಕ್ ಬಾಗಿಲು ಮುರಿದು ಹಣ, ಚಿನ್ನ ಕಳವು

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2020, 8:39 IST
Last Updated 24 ಸೆಪ್ಟೆಂಬರ್ 2020, 8:39 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಯಲಬುರ್ಗಾ: ತಾಲ್ಲೂಕಿನ ಬೇವೂರ ಗ್ರಾಮದ ಪ್ರಗತಿ ಗ್ರಾಮೀಣ ಬ್ಯಾಂಕಿನಲ್ಲಿ ಬುಧವಾರ ರಾತ್ರಿ ಕಳ್ಳತನ ನಡೆದಿದೆ.

21 ಲಕ್ಷಕ್ಕೂ ಅಧಿಕ ನಗದು. ಸುಮಾರು 300 ಗ್ರಾಂ ಚಿನ್ನ ದೋಚಲಾಗಿದೆ ಎಂದು ತಿಳಿದು ಬಂದಿದೆ.

ಬೆಳಿಗ್ಗೆ ಬ್ಯಾಂಕಿನ ಸಿಬ್ಬಂದಿ ಕೆಲಸಕ್ಕೆ ಬ್ಯಾಂಕ್ ಬಾಗಿಲು ತೆಗೆದಾಗಲೇ ಘಟನೆ ಬೆಳಕಿಗೆ ಬಂದಿದೆ. ಕಳ್ಳತನವಾದ ಬಂಗಾರದ ಮೌಲ್ಯವನ್ನು ಕೂಡಾ ಅಂದಾಜಿಸಲಾಗುತ್ತಿದೆ.

ADVERTISEMENT

ಜನನಿಬಿಡ ಪ್ರದೇಶದಲ್ಲಿ ಬ್ಯಾಂಕ್ ಇದೆ. ಅಲ್ಲದೆ ಬ್ಯಾಂಕಿಗೆ ಕಾವಲು ಇದ್ದರೂ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ.

ಬ್ಯಾಂಕಿನ ಕಬ್ಬಿಣದ ರಾಡ್ ಗಳನ್ನು ಕಟ್ ಮಾಡಿ ಹಣ ಮತ್ತು ಚಿನ್ನ ತೆಗೆದುಕೊಂಡು ಹೋಗಿದ್ದಾರೆ ಎಂದು ಸಿಪಿಐ ನಾಗರಡ್ಡಿ ತಿಳಿಸಿದ್ದಾರೆ.

ಸುಮಾರು ಒಂದು ಕೋಟಿಯಷ್ಟು ಕಳ್ಳತನ ಆಗಿದೆಯೆಂದು ಅಂದಾಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.