ADVERTISEMENT

ವರಲಕ್ಷ್ಮೀ ಗುಂಡೂರಾವ್ ಅಸ್ಥಿ ವಿಸರ್ಜನೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2021, 6:15 IST
Last Updated 8 ಜನವರಿ 2021, 6:15 IST
ಶ್ರೀರಂಗಪಟ್ಟಣದ ಪಶ್ಚಿಮವಾಹಿನಿಯಲ್ಲಿ ಮಾಜಿ ಮುಖ್ಯಮಂತ್ರಿ ಗುಂಡೂರಾವ್‌ ಪತ್ನಿ ವರಲಕ್ಷ್ಮೀ ಗುಂಡೂರಾವ್‌ ಅವರ ಅಸ್ಥಿ ವಿಸರ್ಜನೆಗೂ ಮುನ್ನ ಪುತ್ರ ದಿನೇಶ್‌ ಗುಂಡೂರಾವ್‌ ಅಸ್ಥಿ ಕುಡಿಕೆಗೆ ಪೂಜೆ ಸಲ್ಲಿಸಿದರು
ಶ್ರೀರಂಗಪಟ್ಟಣದ ಪಶ್ಚಿಮವಾಹಿನಿಯಲ್ಲಿ ಮಾಜಿ ಮುಖ್ಯಮಂತ್ರಿ ಗುಂಡೂರಾವ್‌ ಪತ್ನಿ ವರಲಕ್ಷ್ಮೀ ಗುಂಡೂರಾವ್‌ ಅವರ ಅಸ್ಥಿ ವಿಸರ್ಜನೆಗೂ ಮುನ್ನ ಪುತ್ರ ದಿನೇಶ್‌ ಗುಂಡೂರಾವ್‌ ಅಸ್ಥಿ ಕುಡಿಕೆಗೆ ಪೂಜೆ ಸಲ್ಲಿಸಿದರು   

ಶ್ರೀರಂಗಪಟ್ಟಣ: ಮಾಜಿ ಮುಖ್ಯಮಂತ್ರಿ ಗುಂಡೂರಾವ್‌ ಅವರ ಪತ್ನಿ ವರಲಕ್ಷ್ಮೀ ಗುಂಡೂರಾವ್‌ ಅವರ ಅಸ್ಥಿಯನ್ನು ಇಲ್ಲಿನ ಪಶ್ಚಿಮವಾಹಿನಿಯಲ್ಲಿ ಗುರುವಾರ ವಿಸರ್ಜಿಸಲಾಯಿತು.

ಗುಂಡೂರಾವ್‌ ಅವರ ಪುತ್ರ ದಿನೇಶ್‌ ಗುಂಡೂರಾವ್‌ ಅವರು ಕಾವೇರಿ ನದಿಯಲ್ಲಿ ತಾಯಿಯ ಅಸ್ಥಿ ವಿಸರ್ಜಿಸಿದರು.

ಬ್ರಾಹ್ಮಣ ಸಂಪ್ರದಾಯದ ವಿಧಿ, ವಿಧಾನದಂತೆ ಅಸ್ಥಿ ವಿಸರ್ಜನೆ ಕಾರ್ಯ ನಡೆಯಿತು. ಇದಕ್ಕೂ ಮುನ್ನ ನದಿಯ ಕಟ್ಟೆಯ ಮೇಲೆ ಅಸ್ಥಿ ಕುಡಿಕೆ ಇಟ್ಟು ಪೂಜೆ ಸಲ್ಲಿಸಿದರು. ಗುಂಡೂರಾವ್‌ ಅವರ ಮತ್ತೊಬ್ಬ ಪುತ್ರ ಮಹೇಶ್‌ ಗುಂಡೂರಾವ್‌ ಜತೆಗಿದ್ದರು.

ADVERTISEMENT

ವೈದಿಕರಾದ ಶೇಷಾದ್ರಿ ಹಾಗೂ ತಂಡ ವಿಧಿ, ವಿಧಾನಗಳನ್ನು ನೆರವೇರಿಸಿತು. ನಗರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎನ್‌.ಪ್ರಕಾಶ್‌, ಕೆಪಿಸಿಸಿ ಸದಸ್ಯ ಎನ್‌.ಗಂಗಾಧರ್‌, ಮುಖಂಡರಾದ ಚಿದಂಬರ್‌, ಕೆ.ಗೋಪಾಲಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.