ಶ್ರೀರಂಗಪಟ್ಟಣ: ಕುಸ್ತಿಪಟುಗಳಿಗೆ ಎಂಟು ತಿಂಗಳಿಂದ ಮಾಸಾಶನ ಬಾರದೆ ಆಸ್ಪತ್ರೆ ಇತರ ಖರ್ಚು ನಿಬಾಯಿಸುವುದು ಕಷ್ಟವಾಗಿದ್ದು, ತಕ್ಷಣ ಮಾಸಾಶನ ಬಿಡು ಗಡೆ ಮಾಡಬೇಕು ಎಂದು ತಾಲ್ಲೂಕಿನ ಹಿರಿಯ ಕುಸ್ತಿಪಟುಗಳು ಆಗ್ರಹಿಸಿದರು.
ಪಟ್ಟಣದಲ್ಲಿ ಮಂಗಳವಾರ ಸಭೆ ನಡೆಸಿದ ಕುಸ್ತಿಪಟುಗಳಾದ ಕುಬೇರ್ಸಿಂಗ್, ಶ್ರೀಕಂಠು, ಗಂಜಾಂ ಜಯರಾಂ, ಗೋವಿಂದರಾಜು, ಶಂಕರ್, ಕೆ.ಶೆಟ್ಟಹಳ್ಳಿ ಮಹಲಿಂಗು, ಪಾಲಹಳ್ಳಿ ಉಮೇಶ್, ಮಹದೇವಪುರದ ವೆಂಕಟರಾಮ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಯುವ ಸಬಲೀಕರಣ ಇಲಾಖೆ, 50 ವರ್ಷ ದಾಟಿದ ಕುಸ್ತಿಪಟುಗಳಿಗೆ ಮಾಸಿಕ ₹ 2,500 ಮಾಸಾಶನ ನೀಡುತ್ತಿತ್ತು. ಆದರೆ ಎಂಟು ತಿಂಗಳುಗಳಿಂದ ಬಿಡಿಗಾಸನ್ನೂ ನೀಡಿಲ್ಲ. ಗ್ರಾಮೀಣ ಪ್ರದೇಶದ ಕುಸ್ತಿಪಟುಗಳು ಇದನ್ನೇ ನೆಚ್ಚಿಕೊಂಡಿದ್ದಾರೆ. ಇಲಾಖೆಯ ಅಧಿಕಾರಿಗಳನ್ನು ಕೇಳಿದರೆ ಜಿಲ್ಲಾ ಪಂಚಾಯಿತಿ ಕಡೆ ಬೊಟ್ಟು ಮಾಡುತ್ತಾರೆ. ಹೀಗೆ ಸಬೂಬು ಹೇಳದೆ ಶೀಘ್ರ ಮಾಸಾಶನ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಇಲಾಖೆಯ ಕಚೇರಿ ಎದುರು ಧರಣಿ ಕೂರುತ್ತೇವೆ ಎಂದು ಕುಸ್ತಿಪಟುಗಳು ಎಚ್ಚರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.