ADVERTISEMENT

ಬೆಳ್ಳೂರು | ಮಾಜಿ ಅಧ್ಯಕ್ಷರಿಂದ ನಕಲಿ ಬಿಲ್ ಆರೋಪ; ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2023, 14:02 IST
Last Updated 10 ಆಗಸ್ಟ್ 2023, 14:02 IST
ಮಾಜಿ ಅಧ್ಯಕ್ಷರುಗಳಿಂದ ನಕಲಿ ಬಿಲ್ ಸೃಷ್ಟಿಸಿ 80 ಲಕ್ಷ ರೂ ಗೂ ಹೆಚ್ಚು ಅಕ್ರಮವೆಸಗಲಾಗಿದೆ ಎಂದು ಆರೋಪಿಸಿ ಮದ್ದೂರು ತಾಲ್ಲೂಕಿನ ಕೊಕ್ಕರೆ ಬೆಳ್ಳೂರು ಗ್ರಾ. ಪಂ ಮುಂದೆ ಗುರುವಾರ ಸದಸ್ಯರು ಹಾಗೂ ಮುಖಂಡರುಗಳು ಪ್ರತಿಭಟನೆ ನಡೆಸಿದರು, ಉಪಾಧ್ಯಕ್ಷೆ ಜ್ಯೋತಿ ಸದಸ್ಯರಾದ ದಿವ್ಯ ರಾಮಚಂದ್ರ ಶೆಟ್ಟಿ,ಸವಿತಾ, ನಟರಾಜು ಮುಖಂಡರಾದ ಸತೀಶ್ ಸೇರಿದಂತೆ ಇತರರು ಇದ್ದರು.
ಮಾಜಿ ಅಧ್ಯಕ್ಷರುಗಳಿಂದ ನಕಲಿ ಬಿಲ್ ಸೃಷ್ಟಿಸಿ 80 ಲಕ್ಷ ರೂ ಗೂ ಹೆಚ್ಚು ಅಕ್ರಮವೆಸಗಲಾಗಿದೆ ಎಂದು ಆರೋಪಿಸಿ ಮದ್ದೂರು ತಾಲ್ಲೂಕಿನ ಕೊಕ್ಕರೆ ಬೆಳ್ಳೂರು ಗ್ರಾ. ಪಂ ಮುಂದೆ ಗುರುವಾರ ಸದಸ್ಯರು ಹಾಗೂ ಮುಖಂಡರುಗಳು ಪ್ರತಿಭಟನೆ ನಡೆಸಿದರು, ಉಪಾಧ್ಯಕ್ಷೆ ಜ್ಯೋತಿ ಸದಸ್ಯರಾದ ದಿವ್ಯ ರಾಮಚಂದ್ರ ಶೆಟ್ಟಿ,ಸವಿತಾ, ನಟರಾಜು ಮುಖಂಡರಾದ ಸತೀಶ್ ಸೇರಿದಂತೆ ಇತರರು ಇದ್ದರು.   

ಮದ್ದೂರು: ಈ ಹಿಂದೆ ಪಂಚಾಯಿತಿ ಅಧ್ಯಕ್ಷರಾಗಿದ್ದ ಸುಂದರಮ್ಮ ಹಾಗೂ ಜಯಲಕ್ಷ್ಮಮ್ಮ ಅವಧಿಯಲ್ಲಿ ಆಗಿನ ಪಿಡಿಓ ಹೇಮಾ ಜತೆಗೂಡಿ ಸುಮಾರು ₹80 ಲಕ್ಷಕ್ಕೂ ಹೆಚ್ಚು ಅವ್ಯವಹಾರ ನಡೆಸಿದ್ದಾರೆ ಎಂದು ಆರೋಪಿಸಿ ಗುರುವಾರ ತಾಲ್ಲೂಕಿನ ಕೊಕ್ಕರೆ ಬೆಳ್ಳೂರು ಪಂಚಾಯಿತಿ ಕಚೇರಿ ಮುಂದೆ ಸದಸ್ಯರು ಹಾಗೂ ಗ್ರಾಮದ ಮುಖಂಡರು ಪ್ರತಿಭಟನೆ ನಡೆಸಿದರು.

ಈ ವೇಳೆ ಪಂಚಾಯಿತಿ ಸದಸ್ಯೆ ದಿವ್ಯಾ ರಾಮಚಂದ್ರಶೆಟ್ಟಿ ಮಾತನಾಡಿ, ‘ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ಸುಂದರಮ್ಮ ಹಾಗೂ ಜಯಲಕ್ಷ್ಮಮ್ಮ ಅವರು 2001, 2022 ಹಾಗೂ 2023ರ ಅಧಿಕಾರ ಅವಧಿಯಲ್ಲಿ ಕಾಮಗಾರಿ ಮಾಡದೆ ನಕಲಿ ಬಿಲ್‌‌‌ಗಳನ್ನು ಸೃಷ್ಟಿಸಿ, ತಿದ್ದಿ ಲಕ್ಷಾಂತರ ಹಣ ಅವ್ಯವಹಾರ ನಡೆಸಿದ್ದಾರೆ ಎಂದು ಆರೋಪಿಸಿದರು.

ಕಾಮಗಾರಿಗೆ ಸಂಬಂಧಿಸಿದಂತೆ ನಕಲಿ ಬಿಲ್ ಸೃಷ್ಟಿಯಾಗಿದೆ. ಸದಸ್ಯರ ಗಮನಕ್ಕೆ ತರದೇ, ಒಪ್ಪಿಗೆ ಪಡೆಯದೇ ಕ್ರಿಯಾ ಯೋಜನೆ ಸಿದ್ದಪಡಿಸಿ ನಿಯಮಗಳನ್ನು ಗಾಳಿಗೆ ತೂರಿ ಅಕ್ರಮ ಎಸಗಿದ್ದು ಪ್ರಶ್ನಿಸಲು ಹೋದರೆ ಜಾತಿ ನಿಂದನೆ ಕೇಸ್ ಹಾಕುವುದಾಗಿ ಎದರಿಸಿದ್ದಾರೆ ಎಂದು ದೂರಿದರು.

ADVERTISEMENT

14 ನೇ, 15ನೇ ಅನುದಾನವನ್ನು ಹಾಗೂ ನರೇಗಾ ಹಣ ಕೂಡಾ ದುರ್ಬಳಕೆ ಮಾಡಲಾಗಿದೆ ಎಂದು ಆರೋಪಿಸಿದ ಅವರು, ಅಂಗವಿಕಲರ ಶೌಚಾಲಯ ನಿರ್ಮಾಣಕ್ಕಾಗಿ ₹6 ಲಕ್ಷ ಬಿಲ್ ಮಾಡಿ ನಿರ್ಮಾಣವನ್ನೇ ಮಾಡಿಲ್ಲ ಹಾಗೂ ಸುಂದರಮ್ಮ ಮಗ ಮನು ಎಂಬುವರಿಗೆ ಸುಮಾರು ₹35 ಲಕ್ಷಕ್ಕೂ ಹೆಚ್ಚು ಬಿಲ್ ಮಾಡಲಾಗಿದೆ ಎಂದರು.

ಅಕ್ರಮಕ್ಕೆ ಸಂಬಂಧಿಸಿದ ಬಿಲ್‌‌‌ಗಳ ಬಗ್ಗೆ ಮಾಹಿತಿಯನ್ನು ಇ,ಒ ಹಾಗೂ ಜಿಲ್ಲಾ ಪಂಚಾಯಿತಿ ಸಿ ಇ ಒ ಅವರಿಗೆ ನೀಡಿ ದೂರು ನೀಡಿದ್ದೇವೆ ಎಂದ ಅವರು, ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮತ್ತೆ ನಿರಂತರ ಹೋರಾಟ ನಡೆಸುವುದಾಗಿ ಎಚ್ಚರಿಸಿ ಘೋಷಣೆ ಕೂಗಿ ಪ್ರತಿಭಟಿಸಲಾಯಿತು.

ಪ್ರತಿಭಟನೆ ನೇತೃತ್ವವನ್ನು ಪಂಚಾಯಿತಿ ಸದಸ್ಯರಾದ ಉಪಾಧ್ಯಕ್ಷೆ ಜ್ಯೋತಿ, ಸದಸ್ಯರಾದ ದಿವ್ಯಾ ರಾಮಚಂದ್ರಶೆಟ್ಟಿ, ಜಯಮ್ಮ, ನಟರಾಜು, ಸವಿತಾ ಮಹದೇಶ್, ಶಿವಸ್ವಾಮಿ, ಮುಖಂಡರಾದ ಸತೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.