ADVERTISEMENT

ಹೊಸಬರಿಗೆ ಸಚಿವ ಸ್ಥಾನ: ಹೈಕಮಾಂಡ್‌ಗೆ ಶಾಸಕ ಉದಯ್ ಪತ್ರ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2026, 6:13 IST
Last Updated 25 ಫೆಬ್ರುವರಿ 2026, 6:13 IST
<div class="paragraphs"><p>ಕಾಂಗ್ರೆಸ್</p></div>

ಕಾಂಗ್ರೆಸ್

   

ಮದ್ದೂರು: ‘ಆಸಕ್ತ ಹೊಸಬರಿಗೆ ಸಚಿವ ಸ್ಥಾನ ನೀಡುವಂತೆ ಹೈಕಮಾಂಡ್‌ಗೆ ಪತ್ರ ಬರೆದಿದ್ದೇವೆ’ ಎಂದು ಶಾಸಕ ಕೆ.ಎಂ ಉದಯ್ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಯುವ ಶಾಸಕರನ್ನು ರಾಜ್ಯದ ಜನತೆ ಆಯ್ಕೆ ಮಾಡಿದ್ದಾರೆ. ನಮ್ಮಂತ ಉದ್ಯಮಿಗಳು ಎಲ್ಲವನ್ನೂ ಬಿಟ್ಟು ಜನಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಹೊಸಬರು, ಯುವಕರಿಗೆ ಅವಕಾಶ ಕೊಟ್ಟರೆ ಆಸಕ್ತಿಯಿಂದ ಕೆಲಸ ಮಾಡುತ್ತಾರೆ, ಇದರಿಂದ ಪಕ್ಷ ಸಂಘಟನೆಗೆ ಅನುಕೂಲವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ಕಳೆದ ಬಾರಿಯ ವಿಶೇಷ ಅಧಿವೇಶನದ ವೇಳೆ ನಾವು ಹೈಕಮಾಂಡ್‌‌ಗೆ ಪತ್ರ ಕಳಿಸಿದ್ದೇವೆ. ವರಿಷ್ಠರು ಇದರ ಬಗ್ಗೆ ಇನ್ನೂ ಚರ್ಚೆ ಮಾಡಿಲ್ಲ. ಪಕ್ಷದ ಹೈಕಮಾಂಡ್ ಸೇರಿದಂತೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡಬಹುದು’ ಎಂದರು.

‘ಪತ್ರ ಬರೆದಿರುವ ವಿಚಾರ ಎಲ್ಲರ ಗಮನಕ್ಕೂ ಬಂದಿದೆ. ನಾವು ಇಂತವರಿಗೆ ಸಚಿವ ಸ್ಥಾನ ಕೊಡಿ ಎಂದು ಕೇಳಲ್ಲ, ಅದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ’ ಎಂದರು.

‘ದಲಿತರನ್ನು ಸಿಎಂ ಮಾಡಬೇಡಿ ಎಂದು ಯಾರೂ ಹೇಳಿಲ್ಲ, ಅದಕ್ಕೆ ಯಾರ ವಿರೋಧವೂ ಇಲ್ಲ. ಎಲ್ಲಾ ನಿರ್ಣಯ ಮಾಡೋದು ಹೈಕಮಾಂಡ್. ಸಮರ್ಥರಿದ್ದವರು ಮುಖ್ಯಮಂತ್ರಿ ಆಗಲಿ. ಡಿ.ಕೆ.ಶಿವಕುಮಾರ್‌ ಅವರಷ್ಟು ಯಾರದರೂ ಸ್ಪೀಡ್ ಇದ್ದರೆ, ಅವರನ್ನು ಮೀರಿಸುವವರು ಇದ್ದರೆ ಅದಕ್ಕೆ ನಾವು ಆಕ್ಷೇಪಣೆ ಮಾಡಲ್ಲ’ ಎಂದು ಸ್ಪಷ್ಟಪಡಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.