ಮಂಡ್ಯ: ಕೆ.ಆರ್.ಪೇಟೆ ತಾಲ್ಲೂಕು ಮೂಡನಹಳ್ಳಿ ಗ್ರಾಮದ ತೋಟದ ಮನೆಯೊಂದಕ್ಕೆ ಬುಧವಾರ ರಾತ್ರಿ ಚಿರತೆ ನುಗ್ಗಿದೆ.
ಗ್ರಾಮದ ರೈತ ನಿಂಗೇಗೌಡರು ಜಾನುವಾರು ಕಟ್ಟುವ ಉದ್ದೇಶದಿಂದ ತೋಟದ ಮನೆ ಮಾಡಿಕೊಂಡಿದ್ದರು.
ಗುರುವಾರ ಬೆಳಿಗ್ಗೆ ಮನೆಗೆ ಬಂದ ನಿಂಗೇಗೌಡರು ಮನೆಯೊಳಗೆ ಶಬ್ದವಾಗುತ್ತಿರುವುದನ್ನು ಕೇಳಿಸಿಕೊಂಡಿದ್ದಾರೆ. ಕಿಟಕಿ ತೆರದು ನೋಡಿದಾಗ ಚಿರತೆ ಇರುವುದನ್ನು ಗಮನಿಸಿದ್ದಾರೆ.
ಗ್ರಾಮಸ್ಥರ ನೆರವು ಪಡೆದು ಅವರು ಮನೆಯ ಎರಡೂ ಬಾಗಿಲು ಮುಚ್ಚಿಸಿ ಚಿರತೆಯನ್ನು ಕೂಡಿಹಾಕಿದ್ದಾರೆ. ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು ಅಧಿಕಾರಿಗಳ ಬರುವಿಕೆಗಾಗಿ ಗ್ರಾಮಸ್ಥರು ಕಾಯುತ್ತಿದ್ದಾರೆ.
ಚಿರತೆ ಒಳಗಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.