ಭಾರತೀನಗರ (ಮಂಡ್ಯ): ಸಮೀಪದ ಮಾದರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿನಿ ಕಾಲಿನ ಮೇಲೆ ತೂಕದ ಕಲ್ಲು ಬಿದ್ದು ಬೆರಳು ಮೂಳೆ ಮುರಿದಿದೆ.
ಗ್ರಾಮದ ತಮಿಳರ ಕಾಲೊನಿಯ ಭಾಗ್ಯಾ ಶಶಿಕುಮಾರ್ ಅವರ ಪುತ್ರಿ, 7 ನೇ ತರಗತಿ ವಿದ್ಯಾರ್ಥಿನಿ ಸಂಜನಾ ಗಾಯಗೊಂಡಿದ್ದಾಳೆ. ಸಂಜನಾ ಶಾಲೆಯಲ್ಲಿ ಬುಧವಾರ ಕೊಠಡಿಯ ಕಸ ಗುಡಿಸುತ್ತಿದ್ದಳು. ಆಗ ಅಕ್ಕಿ ತೂಕ ಮಾಡಲು ಟೇಬಲ್ ಮೇಲಿಟ್ಟಿದ್ದ 5 ಕೆ.ಜಿ ತೂಕದ ಕಲ್ಲು ಬಲಗಾಲ ಮೇಲೆ ಬಿದ್ದಿದೆ.
‘ಶಿಕ್ಷಕರು ವಿದ್ಯಾರ್ಥಿನಿಯನ್ನು ಆಸ್ಪತ್ರೆಗೂ ತೋರಿಸಿಲ್ಲ. ಪೋಷಕರಿಗೂ ವಿಷಯ ತಿಳಿಸಿಲ್ಲ. ಕ್ಷೇತ್ರ ಶಿಕ್ಷಣಾಧಿಕಾರಿಗೆ ದೂರು ನೀಡಲಾಗಿದೆ’ ಎಂದು ಎಸ್ಡಿಎಂಸಿ ಅಧ್ಯಕ್ಷ ಸಿದ್ದಪ್ಪ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.