ಮಂಡ್ಯ: ಜಿಲ್ಲೆಯ ಎರಡು ಕಡೆ ಬಾರ್ ಹಾಗೂ ವೈನ್ಶಾಪ್ಗೆ ಕನ್ನಹಾಕಿರುವ ಕಿಡಿಗೇಡಿಗಳು, ಲಕ್ಷಾಂತರ ರೂಪಾಯಿ ಮೌಲ್ಯದ ಮದ್ಯ ಹೊತ್ತೊಯ್ದಿದ್ದಾರೆ.
ತಾಲ್ಲೂಕಿನ ಚಿಕ್ಕಮಂಡ್ಯದ ಕೃತಿಕಾ ಬಾರ್ನ ಕಿಟಕಿ ಸರಳು ಮುರಿದು ಒಳನುಗ್ಗಿ, ₹5 ಲಕ್ಷ ಮೌಲ್ಯದ ಮದ್ಯ ಕಳ್ಳತನ ಮಾಡಿದ್ದಾರೆ. ಟಾರ್ಚ್ ಬೆಳಕಿನಲ್ಲಿ ಕಳ್ಳತನ ಮಾಡುತ್ತಿರುವ ದೃಶ್ಯ ಸಿ.ಸಿ.ಟಿ.ವಿ. ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಮಳವಳ್ಳಿ ತಾಲ್ಲೂಕು ಹಾಡ್ಲಿ ವೃತ್ತದಲ್ಲಿರುವ ವಿನಾಯಕ ವೈನ್ಶಾಪ್ನಲ್ಲಿ ಗೋಡೆ ಕೊರೆದು ಗುರುವಾರ ರಾತ್ರಿ ಮದ್ಯ ಕದ್ದಿದ್ದಾರೆ.
ಮಂಡ್ಯ: ಜಿಲ್ಲೆಯ ಎರಡು ಕಡೆ ಬಾರ್ ಹಾಗೂ ವೈನ್ಶಾಪ್ಗೆ ಕನ್ನಹಾಕಿರುವ ಕಿಡಿಗೇಡಿಗಳು, ಲಕ್ಷಾಂತರ ರೂಪಾಯಿ ಮೌಲ್ಯದ ಮದ್ಯ ಹೊತ್ತೊಯ್ದಿದ್ದಾರೆ.ನಿಷೇಧಾಜ್ಞೆ ನಡುವೆಯೂ ಜಿಲ್ಲೆಯ ವಿವಿಧೆಡೆ ಕದ್ದುಮುಚ್ಚಿ ಮದ್ಯ ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ.
ಮದ್ಯ ಸಂಗ್ರಹದಲ್ಲಿ ವ್ಯತ್ಯಾಸ ಕಂಡು ಬಂದರೆ ಅಂಗಡಿಗಳ ಲೈಸೆನ್ಸ್ ರದ್ದುಗೊಳಿಸಲಾಗುವುದು ಎಂದು ಅಬಕಾರಿ ಇಲಾಖೆ ಮೈಸೂರು ವಲಯದ ಜಂಟಿ ಆಯುಕ್ತ ಮಾದೇಶ್ ಎಚ್ಚರಿಕೆ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.