
ಮೈಸೂರು: ಲಿಂಗಾಯತ ಸಂಘ–ಸಂಸ್ಥೆಗಳ ವತಿಯಿಂದ ನಗರದಲ್ಲಿ ಹಮ್ಮಿಕೊಳ್ಳಲಾಗಿರುವ ಬಸವ ಜಯಂತಿ ಆಚರಣೆ–2026 ಸಂಬಂಧ ನಡೆದ ಸಭೆಯಲ್ಲಿ, 21 ವಿವಿಧ ಸಮಿತಿಗಳನ್ನು ರಚಿಸಿ ಅಧ್ಯಕ್ಷರನ್ನೂ ಆಯ್ಕೆ ಮಾಡಲಾಗಿದೆ.
ಅಧ್ಯಕ್ಷರು ಇದೇ 28ರೊಳಗೆ ಸಮಿತಿಯನ್ನು ಪೂರ್ಣಗೊಳಿಸಿ ಸದಸ್ಯರ ಪಟ್ಟಿಯನ್ನು ಸಲ್ಲಿಸಲಿದ್ದಾರೆ. ಬಸವ ಜಯಂತಿಯನ್ನು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವ ಉದ್ದೇಶದಿಂದ ಸಾಮಾಜಿಕ ಜಾಲತಾಣಗಳ ಮೂಲಕ ವಿಶೇಷ ಪ್ರಚಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಯೂಟ್ಯೂಬ್ನಲ್ಲಿ ಸಮಾಜದ ಹಾಗೂ ಹಿರಿಯರ ಸಂದೇಶಗಳನ್ನು ಜನರಿಗೆ ತಲುಪಿಸುವ ಯೋಜನೆಯನ್ನೂ ರೂಪಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
| ಕ್ರ.ಸಂ | ಸಮಿತಿಯ ಹೆಸರು | ಅಧ್ಯಕ್ಷರು / ಜವಾಬ್ದಾರಿ ವಹಿಸಿಕೊಂಡವರು |
|---|---|---|
| 1 | ಕಾರ್ಯಕ್ರಮದ ಅಧ್ಯಕ್ಷರು | ಪುಟ್ಟರಾಜು |
| 2 | ಸ್ವಾಗತ ಸಮಿತಿ | ಕುಮಾರಸ್ವಾಮಿ |
| 3 | ವೇದಿಕೆ ಸಮಿತಿ | ಶರತ್ ಪುಟ್ಟಬುದ್ದಿ |
| 4 | ಅತಿಥಿ ಸತ್ಕಾರ | ಕೆ.ಎಚ್. ಕಿರಣ್ |
| 5 | ಮೆರವಣಿಗೆ ಸಮಿತಿ | ಕೆ.ವಿ.ಮಲ್ಲೇಶ್ |
| 6 | ನಗರ ಪ್ರಚಾರ | ಜೀವದಾರ ಗಿರೀಶ್ |
| 7 | ತಾಲ್ಲೂಕು ಪ್ರಚಾರ | ಲೋಹಿತ್ ದೊರೆಸ್ವಾಮಿ |
| 8 | ಕಲಾಮಂದಿರ ಹೊರಾಂಗಣ | ಬಿ.ಆರ್. ಶಿವಕುಮಾರ್ |
| 9 | ಪುತ್ಥಳಿ ಅಲಂಕಾರ | ಆಟೊ ಮಹೇಶ್ |
| 10 | ಪ್ರಸಾದ ವ್ಯವಸ್ಥೆ | ದೂರ ಪರಶಿವಮೂರ್ತಿ |
| 11 | ಮಹಿಳಾ ಸಮಿತಿ | ಮಲ್ಲಿಕಾ ಮಹದೇವು |
| 12 | ಮಕ್ಕಳ ಸಮಿತಿ | ದಿವ್ಯ ಚೇತನ |
| 13 | ಗ್ರಾಮಾಂತರ ಯುವ ಸಮಿತಿ | ಸೋಮಶೇಖರ್ ಬೀರಿಹುಂಡಿ |
| 14 | ನಗರ ಯುವ ಸಮಿತಿ | ಮಲ್ಲೇಶ್ ಮಲ್ಲು |
| 15 | ಸಾಂಸ್ಕೃತಿಕ ಸಮಿತಿ | ಶಾರದಾ ಶಿವಲಿಂಗಸ್ವಾಮಿ |
| 16 | ಆರೋಗ್ಯ ಸಮಿತಿ | ಮಹೇಶ್ |
| 17 | ಸಾಮಾಜಿಕ ಮಾಧ್ಯಮ | ಡಿ.ಚಂದ್ರಶೇಖರ್, ಫೋಟೊ ಮಹೇಂದ್ರ |
| 18 | ಸ್ಮರಣ ಸಂಚಿಕೆ | ಡಿ.ಎಸ್.ಸದಾಶಿವಮೂರ್ತಿ |
| 19 | ಹಣಕಾಸು ನಿರ್ವಹಣೆ | ಕೆ.ಎಸ್.ಮಹದೇವ ಪ್ರಸಾದ್ |
| 20 | ಸ್ವಚ್ಛತಾ ಸಮಿತಿ | ಬಾನು ಮೋಹನ್ |
| 21 | ಮಾಧ್ಯಮ ವಕ್ತಾರರು | ಬಿ.ವಿ.ಮಂಜುನಾಥ್ |
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.