ADVERTISEMENT

ಭಾವನ ಕೊಲೆ ಮಾಡಿ ಪೊಲೀಸರಿಗೆ ಶರಣಾದ ಭಾಮೈದುನ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2021, 12:34 IST
Last Updated 15 ಆಗಸ್ಟ್ 2021, 12:34 IST

ಮೈಸೂರು: ಇಲ್ಲಿನ ಗೌಸಿಯಾನಗರದಲ್ಲಿ ಕದೀರ್ ಎಂಬುವರು ತಮ್ಮ ಭಾವನನ್ನೇ ಕೊಲೆ ಮಾಡಿ, ಕೈಗಳನ್ನು ಕತ್ತರಿಸಿ ಉದಯಗಿರಿ ಪೊಲೀಸ್‌ ಠಾಣೆಗೆ ತಂದು ಶರಣಾಗಿದ್ದಾರೆ.

ಮಹಮದ್ ಸರಾನ್ (27) ಕೊಲೆಯಾದವರು.

ಕಳೆದ ಐದು ತಿಂಗಳ ಹಿಂದಷ್ಟೇ ಮಹಮ್ಮದ್ ಸರಾನ್ ಮತ್ತು ರೂಬೀನಾ ಅವರ ಮದುವೆಯಾಗಿತ್ತು. ಇಬ್ಬರ ನಡುವೆ ಕೌಟುಂಬಿಕ ಕಲಹ, ಜಗಳ ಉಂಟಾಗಿತ್ತು. ಹೀಗಾಗಿ, ಪೋಷಕರು ಬುದ್ಧಿವಾದ ಹೇಳಿದ್ದರು. ಆದರೂ ಇಬ್ಬರ ನಡುವೆ ಕಲಹ ನಿಂತಿರಲಿಲ್ಲ. ಹೀಗಾಗಿ, ಕದೀರ್‌ ಭಾವನನ್ನು ಕೊಲೆ ಮಾಡಿದ್ದಾರೆ.

ADVERTISEMENT

ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.