ADVERTISEMENT

ದಾಸ ಸಾಹಿತ್ಯೋತ್ಸವ ಕಾರ್ಯಕ್ರಮ ಜ.29ರಂದು

​ಪ್ರಜಾವಾಣಿ ವಾರ್ತೆ
Published 27 ಜನವರಿ 2023, 13:21 IST
Last Updated 27 ಜನವರಿ 2023, 13:21 IST

ಮೈಸೂರು: ‘ನಾಟ್ಯ ಸ್ವರಾಂಜಲಿ ಸಂಸ್ಥೆಯಿಂದ ದಾಸ ಸಾಹಿತ್ಯೋತ್ಸವ ಕಾರ್ಯಕ್ರಮವನ್ನು ಜ.29ರಂದು ಸಂಜೆ 5ಕ್ಕೆ ನಾದಬ್ರಹ್ಮ ಸಭಾಂಗನದಲ್ಲಿ ಆಯೋಜಿಸಲಾಗಿದೆ’ ಎಂದು ಸಂಸ್ಥೆಯ ಅಧ್ಯಕ್ಷೆ ಪುಷ್ಪಲತಾ ತಿಳಿಸಿದರು.

ಇಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದಾಸ ಸಾಹಿತ್ಯದ ಹಾಡುಗಳ ಪ್ರಸ್ತುತಿಯ ಕಾರ್ಯಕ್ರಮ ಇದಾಗಿದೆ. ಮುಖ್ಯವಾಗಿ ಮಧ್ವ ಮಾಧವ ಅವರ ಸಾಹಿತ್ಯವನ್ನು ಹಾಡಲಿದ್ದೇವೆ. ಸಾಹಿತ್ಯವನ್ನು ಸಂಗೀತ ಹಾಗೂ ನೃತ್ಯದ ಮೂಲಕ ಜನರಿಗೆ ತಲುಪಿಸುವ ಉದ್ದೇಶ ನಮ್ಮದಾಗಿದೆ’ ಎಂದರು.

ಸಂಗೀತ ನಿರ್ದೇಶಕ ಎ.ಎಸ್‌.ಪ್ರಸನ್ನ, ವಕೀಲ ಚಂದ್ರಶೇಖರ, ಗೀತಾ, ಅಮೃತೇಶ್ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.