ADVERTISEMENT

ಕಿರುಕುಳದಿಂದ ನೊಂದಿರುವೆ: ನೋವು ತೋಡಿಕೊಂಡ ಜೆಡಿಎಸ್‌ ಶಾಸಕ ಸಾ.ರಾ.ಮಹೇಶ್‌

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2019, 17:15 IST
Last Updated 14 ಸೆಪ್ಟೆಂಬರ್ 2019, 17:15 IST
ಸಾ.ರಾ.ಮಹೇಶ್
ಸಾ.ರಾ.ಮಹೇಶ್   

ಸಾಲಿಗ್ರಾಮ (ಮೈಸೂರು): ‘ಕಳೆದ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವ ದಿನದಂದು ಶುರುವಾದ ಕಿರುಕುಳ ಸಚಿವನಾದ ಮೇಲೂ ನಿಲ್ಲಲಿಲ್ಲ. ಇದರಿಂದ ತುಂಬಾ ನೊಂದಿರುವೆ’ ಎಂದು ಜೆಡಿಎಸ್‌ ಶಾಸಕ ಸಾ.ರಾ.ಮಹೇಶ್‌ ನೋವು ತೋಡಿಕೊಂಡರು.

‘ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕೆ.ಆರ್‌.ನಗರ ಕ್ಷೇತ್ರ ಬಿಟ್ಟು ಮತ್ತೊಂದು ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆ ಎಂಬ ವದಂತಿ ಹಬ್ಬಿಸಿದ್ದಾರೆ. ಇದರಿಂದ ಮತ್ತಷ್ಟು ನೋವಾಗಿದೆ’ ಎಂದು ಶನಿವಾರ ಹೇಳಿದರು.

‘ಕೆ.ಆರ್‌.ನಗರ ಕ್ಷೇತ್ರವೇ ನನ್ನ ಕರ್ಮಭೂಮಿ. ನಾನು ಬದುಕಿರುವ ತನಕ ನನಗೆ ರಾಜಕೀಯ ನಾಯಕ ಎಂದರೆ ಅದು ಎಚ್.ಡಿ.ಕುಮಾರಸ್ವಾಮಿ. ರಾಜಕೀಯ ಬೇಸರ ಎನಿಸಿದರೆ ಈ ಕ್ಷೇತ್ರದಿಂದ ದೂರ ಉಳಿದುಬಿಡುವೆ’ ಎಂದು ಭಾವುಕರಾದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.