ಹುಣಸೂರು:ರಸ್ತೆಯಲ್ಲಿ ಮಲಗಿದ್ದ ಹೆಬ್ಬಾವನ್ನು ಪ್ರಯಾಣಿಕರೊಬ್ಬರು ರಸ್ತೆ ಮಗ್ಗಲಿಗೆ ಎಳೆದು ಬಿಟ್ಟ ವಿಡಿಯೋ ವೈರಲ್ ಆಗಿದ್ದು, ಆ ಸಮಯದಲ್ಲಿ ಸಹಪ್ರಯಾಣಿಕರು ಹಾವನ್ನು ಎಳೆಯದಂತೆ ಸೂಚಿಸಿದರೂ ಲೆಕ್ಕಿಸದ ವ್ಯಕ್ತಿ ಸಾಹಸ ಮಾಡುವ ರೀತಿ ರಸ್ತೆಯಿಂದ ಪಕ್ಕಕ್ಕೆ ಹಾಕಿದ ವಿಡಿಯೋ ವೈರಲ್ ಆಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ನಾಗರಹೊಳೆ ಅರಣ್ಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ದಯಾನಂದ್, ಹೆಬ್ಬಾವು ಎಚ್.ಡಿ.ಕೋಟೆ ಬಳ್ಳೆ ಅಂತರಸಂತೆ ವಲಯ ವ್ಯಾಪ್ತಿಯಲ್ಲಿ ಕೇರಳ ರಾಜ್ಯಕ್ಕೆ ಹಾದು ಹೋಗುವ ರಸ್ತೆಯಲ್ಲಿ ಮಲಗಿತ್ತು.ಅದನ್ನು ಸಾರ್ವಜನಿಕರೊಬ್ಬರು ಪಕ್ಕಕ್ಕೆ ಎಳೆದುಬಿಟ್ಟು ರಕ್ಷಣೆ ಮಾಡಿದ್ದಾರೆ. ಒಂದು ವೇಳೆ ವಾಹನ ಹರಿಸಿದ್ದರೆ ಶಿಕ್ಷೆಗೆ ಒಳಗಾಗುತ್ತಿದ್ದರು. ಘಟನೆ ಬಗ್ಗೆ ತನಿಖೆ ನಡೆಸಲಾಗುವುದು ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.