ಮೈಸೂರು: ಅರಮನೆಯಲ್ಲಿ ಬಿಡಾರ ಹೂಡಿರುವ ದಸರಾ ಆನೆ ‘ಲಕ್ಷ್ಮಿ’ಮಂಗಳವಾರ ರಾತ್ರಿ ಮರಿಗೆ ಜನ್ಮ ನೀಡಿದ್ದಾಳೆ.
ತಾಯಿ ಆನೆ ಹಾಗೂ ಮರಿ ಆರೋಗ್ಯವಾಗಿದ್ದು, ಉಳಿದ ಆನೆಗಳಿಂದ ಬೇರ್ಪಡಿಸಿ ಆವರಣದ ಸುರಕ್ಷಿತ ಪ್ರದೇಶದಲ್ಲಿ ಇರಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಅಂಬಾರಿ ಆನೆ ಅಭಿಮನ್ಯು ನೇತೃತ್ವದ 14 ಆನೆಗಳು ದಸರಾ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲಿದ್ದು, ಚೈತ್ರಾ, ಕಾವೇರಿ, ಲಕ್ಷ್ಮಿ ಹಾಗೂ ವಿಜಯಾ ಹೆಣ್ಣಾನೆಗಳು ಇವೆ.
ಲಕ್ಷ್ಮಿ ಮರಿ ಹಾಕಿರುವುದರಿಂದ ದಸರೆಯಲ್ಲಿ ಆಕೆ ಪಾಲ್ಗೊಳ್ಳುವುದು ಬಹುತೇಕ ಅನುಮಾನ. ಉಳಿದ ಆನೆಗಳು ಎಂದಿನಂತೆ ತಾಲೀಮಿನಲ್ಲಿ ಭಾಗವಹಿಸಲಿವೆ ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.