ADVERTISEMENT

ಮಳೆ ಹಾನಿಯ ಮಾಹಿತಿಯಿಲ್ಲ: ಕೃಷಿ ಸಚಿವ ಬಿ.ಸಿ.ಪಾಟೀಲ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2020, 13:15 IST
Last Updated 16 ಅಕ್ಟೋಬರ್ 2020, 13:15 IST

ಮೈಸೂರು: ‘ಅಕ್ಟೋಬರ್‌ ತಿಂಗಳಲ್ಲಿ ಉತ್ತರ ಹಾಗೂ ಕಲ್ಯಾಣ ಕರ್ನಾಟಕದಲ್ಲಿ ಸುರಿಯುತ್ತಿರುವ ಮಳೆಯಿಂದಾದ ಹಾನಿಯ ಮಾಹಿತಿ ಲಭ್ಯವಿಲ್ಲ’ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಶುಕ್ರವಾರ ಇಲ್ಲಿ ಪ್ರತಿಕ್ರಿಯಿಸಿದರು.

‘ಎರಡು ತಿಂಗಳ ಹಿಂದೆ ಪ್ರವಾಹದಿಂದ ಉಂಟಾದ ಹಾನಿಯ ಮಾಹಿತಿಯೂ ಮರೆತು ಹೋಗಿದೆ’ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಕ್ಷಣವೇ ಎಚ್ಚೆತ್ತ ಬಿ.ಸಿ.ಪಾಟೀಲ ‘ರಾಜ್ಯದ ಉತ್ತರ ಭಾಗದಲ್ಲಿ ಮಳೆಯಿಂದಾಗಿರುವ ಹಾನಿಯ ಸರ್ವೆ ಶುಕ್ರವಾರದಿಂದ ಆರಂಭವಾಗಿದೆ. ನಷ್ಟದ ಪ್ರಮಾಣವನ್ನು ತಿಳಿಸಲಾಗುವುದು. ಎರಡು ತಿಂಗಳ ಹಿಂದೆ ಆಗಿರುವ ಹಾನಿಯ ಮಾಹಿತಿಯನ್ನು ಶೀಘ್ರದಲ್ಲೇ ಪಡೆದುಕೊಳ್ಳುವೆ’ ಎಂದು ತಡವರಿಸಿಕೊಂಡೇ ಹೇಳಿದ ಸಚಿವರು, ಬೆಳೆ ಸಮೀಕ್ಷೆಯ ವಿವರ ನೀಡಿ ಮತ್ತೊಂದು ಸಭೆಯಿದೆ ಎಂದು ಸ್ಥಳದಿಂದ ಕಾಲ್ಕಿತ್ತರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.