ಮೈಸೂರು: ತಾಲ್ಲೂಕಿನ ಸಿದ್ದರಾಮನಹುಂಡಿ ಗ್ರಾಮದಲ್ಲಿ ಸಗಟು ದಿನಸಿ ಅಂಗಡಿ ವಿನಾಯಕ ಟ್ರೇಡರ್ಸ್ ಗೆ ಭಾನುವಾರ ನಸುಕಿನಲ್ಲಿ ಬೆಂಕಿ ತಗುಲಿ, ಲಕ್ಷಾಂತರ ರೂಪಾಯಿ ಮೌಲ್ಯದ ದಿನಸಿ ಹಾಗೂ ಇತರೆ ಪದಾರ್ಥಗಳು ಸುಟ್ಟು ಹೋಗಿವೆ.
ಸ್ಥಳಕ್ಕೆ ಅಗ್ನಿಶಾಮಕ ಪಡೆ ಬಂದು ಬೆಂಕಿ ನಂದಿಸಿ, ಅಕ್ಕಪಕ್ಕದಲ್ಲಿದ್ದ ಗೊಬ್ಬರದ ಅಂಗಡಿಗಳಿಗೆ ಬೆಂಕಿ ಹರಡುವುದನ್ನು ತಡೆಯಿತು. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಸಂಭವಿಸಿರಬಹುದು ಎಂದು ಸಿಬ್ಬಂದಿ ತಿಳಿಸಿದ್ದಾರೆ.
ಅಂಗಡಿಯಲ್ಲಿ ಸುಮಾರು₹ 20 ಲಕ್ಷ ಮೌಲ್ಯದ ಪದಾರ್ಥಗಳಿದ್ದು, ಈಗ ಎಲ್ಲವೂ ಭಸ್ಮವಾಗಿವೆ ಎಂದು ಅಂಗಡಿ ಮಾಲೀಕ ಉದಯ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.