ADVERTISEMENT

ಸಿ.ಎಂ ದಾಖಲೆ: ನಗರದಲ್ಲಿ ಸಂಭ್ರಮಾಚರಣೆ

ಪಟಾಕಿ ಸಿಡಿಸಿ ಸಡಗರ: ರಾತ್ರಿವರೆಗೂ ನಡೆದ ಬಿರಿಯಾನಿ ವಿತರಣೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2026, 4:40 IST
Last Updated 7 ಜನವರಿ 2026, 4:40 IST
ಮೈಸೂರಿ ಟಿ.ಕೆ.ಬಡಾವಣೆಯಲ್ಲಿ ಕಾಂಗ್ರೆಸ್‌ ಮುಖಂಡರಾದ ಎಚ್‌.ಪಿ.ಮಂಜುನಾಥ್, ಎಂ.ಲಕ್ಷ್ಮಣ, ಬಿ.ಜೆ.ವಿಜಯಕುಮಾರ್, ಗೋಪಿ ಅವರು ನಾಗರಿಕರಿಗೆ ಬಿರಿಯಾನಿ, ನಾಟಿಕೋಳಿ ಸಾರು ವಿತರಿಸಿದರು 
ಮೈಸೂರಿ ಟಿ.ಕೆ.ಬಡಾವಣೆಯಲ್ಲಿ ಕಾಂಗ್ರೆಸ್‌ ಮುಖಂಡರಾದ ಎಚ್‌.ಪಿ.ಮಂಜುನಾಥ್, ಎಂ.ಲಕ್ಷ್ಮಣ, ಬಿ.ಜೆ.ವಿಜಯಕುಮಾರ್, ಗೋಪಿ ಅವರು ನಾಗರಿಕರಿಗೆ ಬಿರಿಯಾನಿ, ನಾಟಿಕೋಳಿ ಸಾರು ವಿತರಿಸಿದರು    

ಮೈಸೂರು: ರಾಜ್ಯದ ದೀರ್ಘಾವಧಿ ಮುಖ್ಯಮಂತ್ರಿ ಎಂದ ದಾಖಲೆಗೆ ಪಾತ್ರರಾದ ಕಾರಣ ಸಿ.ಎಂ ಸಿದ್ದರಾಮಯ್ಯ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ಮಂಗಳವಾರ ನಗರದೆಲ್ಲೆಡೆ ಸಂಭ್ರಮಾಚರಣೆ ನಡೆಸಿದರು.

ತೊಣಚಿಕೊಪ್ಪಲು, ಹೂಟಗಳ್ಳಿ, ಹಿನಕಲ್‌, ರಾಮಸ್ವಾಮಿ ವೃತ್ತ, ಸರಸ್ವತಿಪುರಂ ಸೇರಿದಂತೆ ವಿವಿಧೆಡೆ ಫ್ಲೆಕ್ಸ್, ಕಟೌಟ್‌ಗಳು ರಾರಾಜಿಸಿದವು. 

ಸಿ.ಎಂ ಅವರೇ ನಗರದಲ್ಲಿ ಇದ್ದುದರಿಂದ ಉತ್ಸವದ ಮಾದರಿಯಲ್ಲಿ ಉತ್ಸಾಹದಿಂದ ಸೇವಾ ಕಾರ್ಯಗಳಲ್ಲಿ ಪಾಲ್ಗೊಂಡ ಅಭಿಮಾನಿಗಳು, ಅವರಿಗೆ ಇಷ್ಟವಾದ ನಾಟಿಕೋಳಿ ಬಿರಿಯಾನಿ, ಪಲಾವ್, ಲಾಡು, ಪಾಯಸವನ್ನು ನಾಗರಿಕರಿಗೆ ಹಂಚಿ ಅಭಿಮಾನವನ್ನು ತೋರ್ಗೊಟ್ಟರು.  

ADVERTISEMENT

ನಾಟಿ ಪಲಾವ್‌ ಸ್ವಾದ:

ಟಿ.ಕೆ.ಬಡಾವಣೆಯ ಸಿ.ಎಂ ನಿವಾಸದಲ್ಲಿ ಅಹವಾಲು ಸಲ್ಲಿಸಲು ಬಂದವರಿಗೆ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು, ಮುಖಂಡರಾದ ಯೋಗೇಶ್ ಉಪ್ಪಾರ್, ಎಚ್.ಎಸ್.ಪ್ರಕಾಶ್, ಕೋಟೆಹುಂಡಿ ಸಿ.ಮಹದೇವು, ಹರೀಶ್ ಮೊದಲಾದವರು ನಾಟಿಕೋಳಿ ಪಲಾವ್ ನೀಡಿದರು. 

ಮುಖಂಡ ಜೆ.ಗೋಪಿ ಮೈಸೂರು ಪಾಕ್, ಬರ್ಫಿ ವಿತರಿಸಿದರೆ, ಮೋಹನ್‌ಕುಮಾರ್ ಅವರು ಪೋಸ್ಟರ್ ಹಿಡಿದು ಸಿಹಿ ಹಂಚಿದರು. ಅವರ ಪೋಸ್ಟರ್‌ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಸ್ತಾಕ್ಷರ ಹಾಕಿದರು.  

ಗಣ್ಯರಿಂದ ಅಭಿನಂದನೆ:

ನಿವಾಸದಲ್ಲಿ ಸಿ.ಎಂ ಅವರನ್ನು ಭೇಟಿ ಮಾಡಿದ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್, ಶಾಸಕರಾದ ಕೆ.ಹರೀಶ್ ಗೌಡ, ಎ.ಆರ್.ಕೃಷ್ಣಮೂರ್ತಿ, ಡಿ.ರವಿಶಂಕರ್, ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಮುಖಂಡರಾದ ಎಂ.ಕೆ.ಸೋಮಶೇಖರ್, ಎಚ್.ಪಿ.ಮಂಜುನಾಥ್, ವಿವಿಧ ನಿಗಮಗಳ ಅಧ್ಯಕ್ಷರಾದ ಎಂ.ರಾಮಪ್ಪ, ಎಚ್.ಡಿ.ಗಣೇಶ್, ಅಯೂಬ್ ಖಾನ್, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಟಿ.ಬಿ.ಚಿಕ್ಕಣ್ಣ, ಅನಂತು, ಕೆ.ಮರೀಗೌಡ ಶುಭ ಕೋರಿದರು. 

ದಕ್ಷಿಣ ವಲಯ ಐಜಿಪಿ ಡಾ.ಎಂ.ಬಿ.ಬೋರಲಿಂಗಯ್ಯ, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಿಪಂ ಸಿಇಒ ಎಸ್.ಯುಕೇಶ್ ಕುಮಾರ್, ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್, ಎಂಡಿಎ ಆಯುಕ್ತ ಕೆ.ಆರ್.ರಕ್ಷಿತ್, ಡಿಸಿಪಿ ಕೆ.ಎಸ್.ಸುಂದರರಾಜ್ ಪಾಲ್ಗೊಂಡಿದ್ದರು. 

ನಗರದ ಬಸ್‌ ನಿಲ್ದಾಣದಲ್ಲಿ ಕೃಷ್ಣರಾಜ ಯುವ ಬಳಗದ ಸದಸ್ಯರು ಪ್ರಯಾಣಿಕರಿಗೆ ಮೈಸೂರು ಪಾಕ್ ವಿತರಿಸಿದರು. ಕರುಣಾಮಯಿ ವಿಷ್ಣು ಅಭಿಮಾನಿ ಬಳಗದ ಅಧ್ಯಕ್ಷ ಎಸ್.ಎನ್.ರಾಜೇಶ್ ಕೃಷ್ಣರಾಜ ಯುವ ಬಳಗದ ಅಧ್ಯಕ್ಷ ನವೀನ್ ಕೆಂಪಿ ಕನಕದಾಸ ಸಹಕಾರಿ ಸಂಘದ ನಿರ್ದೇಶಕ ರವಿಚಂದ್ರ ರಾಕೇಶ್ ದುರ್ಗಾ ಪ್ರಸಾದ್ ರವಿನಂದನ್ ವಿನಯ್ ಕುಮಾರ್ ಹೇಮಂತ್ ರಾಜು ಪಾಲ್ಗೊಂಡಿದ್ದರು
ಅಗ್ರಹಾರದ 101 ಗಣಪತಿ ದೇಗುಲಕ್ಕೆ ಪೂಜೆ ಸಲ್ಲಿಸಿದ ಕಾಂಗ್ರೆಸ್‌ ಮುಖಂಡರಾದ ಎಚ್‌.ಎ.ವೆಂಕಟೇಶ್‌ ಎಂ.ಕೆ.ಸೋಮಶೇಖರ್‌ ಆರ್.ಮೂರ್ತಿ ಎಂ.ಲಕ್ಷ್ಮಣ ಸಿಹಿ ಹಂಚಿದರು
ಮೈಸೂರಿನ ಹೂಟಗಳ್ಳಿಯಲ್ಲಿ ‘ಸಿದ್ದರಾಮಯ್ಯ ಬ್ರಿಗೇಡ್‌’ ಅಧ್ಯಕ್ಷ ಹಿನಕಲ್ ಉದಯ್‌ ಮತ್ತು ಅಭಿಮಾನಿಗಳು ಪೌರಕಾರ್ಮಿಕರಿಗೆ ನಾಟಿಕೋಳಿ ಬಿರಿಯಾನಿ ವಿತರಿಸಿದರು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.