ADVERTISEMENT

ಕೆಬ್ಬೆಕೊಪ್ಪಲು: ಎರಡು ವರ್ಷದ ಚಿರತೆ ಸಾವು

​ಪ್ರಜಾವಾಣಿ ವಾರ್ತೆ
Published 14 ಜನವರಿ 2020, 11:20 IST
Last Updated 14 ಜನವರಿ 2020, 11:20 IST
ಹುಣಸೂರು ತಾಲ್ಲೂಕಿನ ಕೆಬ್ಬೆಕೊಪ್ಪಲು ಕೆರೆ ಏರಿ ಮೇಲೆ ಮೃತಪಟ್ಟಿರುವ ಚಿರತೆ
ಹುಣಸೂರು ತಾಲ್ಲೂಕಿನ ಕೆಬ್ಬೆಕೊಪ್ಪಲು ಕೆರೆ ಏರಿ ಮೇಲೆ ಮೃತಪಟ್ಟಿರುವ ಚಿರತೆ    

ಹುಣಸೂರು: ಕೆಬ್ಬೆಕೊಪ್ಪಲು ಕೆರೆ ಏರಿ ಮೇಲೆ 2 ವರ್ಷದ ಚಿರತೆ ಅನುಮಾನಾಸ್ಪದವಾಗಿ ಮೃತಪಟ್ಟಿದೆ.

‌ಕೆರೆ ಏರಿ ಮೇಲೆ ಚಿರತೆ ಕಳೇಬರ ಇರುವುದನ್ನು ಕಂಡ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದರು.

ಸ್ಥಳಕ್ಕೆ ಎಸಿಎಫ್‌ ಸೋಮಯ್ಯ ಮತ್ತು ಡಿಆರ್‌ಎಫ್‌ಒ ರಿಜ್ವಾನ್ ಭೇಟಿ ನೀಡಿ ಪರಿಶೀಲಿಸಿದರು. ಅರಣ್ಯ ಇಲಾಖೆ ಪಶುವೈದ್ಯಾಧಿಕಾರಿ ಡಾ.ಮುಜೀಬ್ ರೆಹಮಾನ್ ಮರಣೋತ್ತರ ಪರೀಕ್ಷೆ ನಡೆಸಿ ನಂತರ ಸಂಸ್ಕಾರ ಮಾಡಲಾಯಿತು.

ADVERTISEMENT

ಚಿರತೆ ಮೇಲೆ ಗಾಯಗಳು ಗೋಚರಿಸಿದ್ದು, ಕಾಡುಹಂದಿಯೊಂದಿಗೆ ಕಾದಾಟ ನಡೆಸಿ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಸೋಮಯ್ಯ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.