ADVERTISEMENT

ದೇವೇಗೌಡ ಹೇಳಿಕೆಗೆ ವಿಶ್ವನಾಥ್ ಸಮರ್ಥನೆ

​ಪ್ರಜಾವಾಣಿ ವಾರ್ತೆ
Published 21 ಜೂನ್ 2019, 18:00 IST
Last Updated 21 ಜೂನ್ 2019, 18:00 IST
ಎಚ್‌.ವಿಶ್ವನಾಥ್‌
ಎಚ್‌.ವಿಶ್ವನಾಥ್‌   

ಮೈಸೂರು: ಮಧ್ಯಂತರ ಚುನಾವಣೆ ಕುರಿತು ದೇವೇಗೌಡ ನೀಡಿರುವ ಹೇಳಿಕೆಯನ್ನು ಶಾಸಕ ಎಚ್‌.ವಿಶ್ವನಾಥ್‌ ಸಮರ್ಥಿಸಿಕೊಂಡಿದ್ದಾರೆ.

‘ದೇವೇಗೌಡರು ರಾಜಕೀಯ ಮುತ್ಸದ್ದಿ. ರಾಜಕಾರಣದ ಒಳ ಹೊರಗುಗಳನ್ನು ಅಪಾರವಾಗಿ ಬಲ್ಲ ಅನುಭವಿ. ಅವರು ಹೇಳುವುದರಲ್ಲಿ ಸತ್ಯವೂ ಇರುತ್ತದೆ’ ಎಂದು ತಿಳಿಸಿದರು.

‘ಮಧ್ಯಂತರ ಚುನಾವಣೆ ಬಗ್ಗೆ ಸುಲಭವಾಗಿ ತೀರ್ಮಾನ ತೆಗೆದುಕೊಳ್ಳಲು ಆಗದು. ಎಚ್‌.ಡಿ.ಕುಮಾರಸ್ವಾಮಿ ಅವರ ನಾಯಕತ್ವದಲ್ಲಿ ಸಮ್ಮಿಶ್ರ ಸರ್ಕಾರ ಚೆನ್ನಾಗಿ ನಡೀತಾ ಇದೆ. ಸರ್ಕಾರವನ್ನು ಬೀಳಿಸುವುದು ಸುಲಭವಲ್ಲ. ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪರಸ್ಪರ ಅಪಘಾತ ಮಾಡಿಕೊಂಡರೆ ಮುಂದೆ ಏನಾಗುವುದೋ ಗೊತ್ತಿಲ್ಲ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.