ADVERTISEMENT

ಮೃತ ಹರ್ಷ‌ ಕುಟುಂಬಕ್ಕೆ ಮಂತ್ರಾಲಯ ಮಠದಿಂದ ₹50 ಸಾವಿರ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2022, 7:20 IST
Last Updated 28 ಫೆಬ್ರುವರಿ 2022, 7:20 IST
   

ರಾಯಚೂರು: ಶಿವಮೊಗ್ಗದಲ್ಲಿ ಹತ್ಯೆಗೀಡಾದ ಹರ್ಷ ಅವರ ಕುಟುಂಬಕ್ಕೆ ಮಂತ್ರಾಲಯ ಮಠದಿಂದ ಪ್ರಸಾದರೂಪದಲ್ಲಿ ₹ 50 ಸಾವಿರ ನೀಡಲಾಗುತ್ತಿದೆ ಎಂದು ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.

'ಸನಾತನ ಧರ್ಮ ಸಂರಕ್ಷಿಸುವ ಸಲುವಾಗಿ ಭಜರಂಗದಳದ ಕಾರ್ಯಕರ್ತ ತನ್ನ ಪ್ರಾಣ ಅರ್ಪಿಸಿದ್ದು, ಆತನ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬುವ ಧ್ಯೋತಕವಾಗಿ ಭಕ್ತರ ಮೂಲಕ ನೆರವು ನೀಡಲಾಗುತ್ತಿದೆ' ಎಂದು ಶ್ರೀಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT