ರಾಯಚೂರು: ಮಾನ್ವಿ ತಾಲ್ಲೂಕು ಉಪ ನೋಂದಣಾಧಿಕಾರಿ ಶಕೀಲ್ ಅಹ್ಮದ್ (45) ಅವರು ಕೋವಿಡ್ನಿಂದ ಚೇತರಿಸಿಕೊಳ್ಳದೇ ಹೈದರಾಬಾದ್ ಆಸ್ಪತ್ರೆಯಲ್ಲಿ ಶನಿವಾರ ಮೃತಪಟ್ಟಿದ್ದು, ಸುದ್ದಿ ತಿಳಿಯುತ್ತಿದ್ದಂತೆಯೇ ಆಘಾತಕ್ಕೊಳಗಾಗಿ ರಾಯಚೂರಿನಲ್ಲಿದ್ದ ಅವರ ತಾಯಿ ರಜೀಯಾ ಸುಲ್ತಾನಾ (65) ಸಹ ಸಾವನ್ನಪ್ಪಿದ್ದಾರೆ.
ಜುಲೈ 26ರಂದು ಕೋವಿಡ್ ದೃಢಪಟ್ಟ ಬಳಿಕ ಶಕೀಲ್ ಅವರನ್ನು ರಾಯಚೂರಿನ ಓಪೆಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಉಸಿರಾಟ ತೊಂದರೆ ತೀವ್ರವಾಗಿದ್ದರಿಂದ ಹೈದರಾಬಾದ್ಗೆ ಸ್ಥಳಾಂತರಿಸಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.