ADVERTISEMENT

ರಾಯಚೂರು ಕೃಷಿ ವಿವಿಗೆ ಕುಲಪತಿಯಾಗಿ ಡಾ.ಕೆ.ಎನ್. ಕಟ್ಟಿಮನಿ ನೇಮಕ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2018, 15:40 IST
Last Updated 16 ಅಕ್ಟೋಬರ್ 2018, 15:40 IST
ಡಾ. ಕೆ.ಎನ್‌. ಕಟ್ಟಿಮನಿ
ಡಾ. ಕೆ.ಎನ್‌. ಕಟ್ಟಿಮನಿ   

ರಾಯಚೂರು: ಬಾಗಲಕೋಟೆ ತೋಟಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯದ ಕುಲಸಚಿವ ಡಾ.ಕೆ.ಎನ್. ಕಟ್ಟಿಮನಿ ಅವರನ್ನು ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿಯಾಗಿ ನೇಮಕಗೊಳಿಸಿ ರಾಜ್ಯಪಾಲ ವಾಜುಬಾಯ್ ವಾಲಾ ಅವರು ಆದೇಶ ಹೊರಡಿಸಿದ್ದಾರೆ.

ಅಧಿಕಾರ ಅವಧಿ ನಾಲ್ಕು ವರ್ಷ ಅಥವಾ ವಯೋಮಿತಿ65 ವರ್ಷ ಪೂರ್ಣವಾದರೆ ಮುಕ್ತಾಯವಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಎಂಟು ತಿಂಗಳಿನಿಂದ ಕುಲಪತಿ ಹುದ್ದೆ ಖಾಲಿಯಾಗಿತ್ತು. ಈ ಅವಧಿಯಲ್ಲಿ ಕುಲಸಚಿವ ಜಂಬುನಾಥ ಗುತ್ತಿ ಆರು ತಿಂಗಳಾವಧಿ ಹಾಗೂ ಡಾ. ಎಸ್‌.ಕೆ. ಮೇಟಿ ಒಂದೂವರೆ ತಿಂಗಳು ಪ್ರಭಾರಿ ಕುಲಸಚಿವರಾಗಿ ಕಾರ್ಯನಿರ್ವಹಿಸಿದ್ದರು. ನೂತನ ಕುಲಪತಿಗಳು ಬುಧವಾರ ಬೆಳಿಗ್ಗೆ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT