ADVERTISEMENT

ರಾಯರ ದರ್ಶನ ಪಡೆದ ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2023, 16:25 IST
Last Updated 29 ಜನವರಿ 2023, 16:25 IST
ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಹಾಗೂ ಅನಿತಾ ಕುಮಾರಸ್ವಾಮಿ ಮಂತ್ರಾಲಯದಲ್ಲಿ ಭಾನುವಾರ ರಾಯರ ಬೃಂದಾವನ‌ ದರ್ಶನ ಮಾಡಿ, ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರಿಂದ ಆಶೀರ್ವಾದ ಪಡೆದರು
ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಹಾಗೂ ಅನಿತಾ ಕುಮಾರಸ್ವಾಮಿ ಮಂತ್ರಾಲಯದಲ್ಲಿ ಭಾನುವಾರ ರಾಯರ ಬೃಂದಾವನ‌ ದರ್ಶನ ಮಾಡಿ, ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರಿಂದ ಆಶೀರ್ವಾದ ಪಡೆದರು   

ರಾಯಚೂರು: ಜಿಲ್ಲೆಯಲ್ಲಿ ಪಂಚರತ್ನ ಯಾತ್ರೆ ಮುಂದುವರಿಸಿರುವ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರು ಭಾನುವಾರ ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿ ದರ್ಶನ ಪಡೆದರು. ಅವರೊಂದಿಗೆ ಪತ್ನಿ ಅನಿತಾ ಕುಮಾರಸ್ವಾಮಿ ಸಹ ಇದ್ದರು.

ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಶ್ರೀಗಳು ರಾಯರ ಶೇಷವಸ್ತ್ರ ಹೊದಿಸಿ ನೆನಪಿ‌ನ ಕಾಣಿಕೆ ನೀಡಿದರು‌.

ಮಠದಡಿಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಶ್ರೀಗಳು ಕುಮಾರಸ್ವಾಮಿ ಅವರಿಗೆ ತೋರಿಸಿದರು.

ADVERTISEMENT

ಮಠದ ಅಧಿಕಾರಿಗಳು, ಜೆಡಿಎಸ್‍ ಮುಖಂಡರಾದ ಜಿ.ಕರೆಮ್ಮ ನಾಯಕ, ಸಿದ್ಧು ಬಂಡಿ, ಎನ್.ಶಿವಶಂಕರ ವಕೀಲ ಹಾಗೂ ಲಕ್ಷ್ಮೀಪತಿ ಗಾಣದಾಳ ಇದ್ದರು.

ಪಂಚರತ್ನ ರಥಯಾತ್ರೆ 29 ರಂದು ರಾಯಚೂರಿನಲ್ಲಿ ಕೊನೆಯಾಗಿದ್ದು, ಕೊಪ್ಪಳ ಜಿಲ್ಲೆಯತ್ತ ಸಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.