ADVERTISEMENT

ರಾಯಚೂರು | ಗೌಡೂರು ಹೊಸಗುಡ್ಡ ಗ್ರಾಮದಲ್ಲಿ ತುಂಬಿ ಹರಿದ ಹಳ್ಳಗಳು

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2025, 5:41 IST
Last Updated 19 ಸೆಪ್ಟೆಂಬರ್ 2025, 5:41 IST
ಹಟ್ಟಿ ಸಮೀಪದ ಗೌಡೂರು ಗ್ರಾಮದ ಚನ್ನಪ್ಪ ಅವರ ಮನೆಗೆ ಮಳೆ‌ ನೀರು ನುಗ್ಗಿರುವುದು
ಹಟ್ಟಿ ಸಮೀಪದ ಗೌಡೂರು ಗ್ರಾಮದ ಚನ್ನಪ್ಪ ಅವರ ಮನೆಗೆ ಮಳೆ‌ ನೀರು ನುಗ್ಗಿರುವುದು   

ಹಟ್ಟಿ ಚಿನ್ನದ ಗಣಿ: ಬುಧವಾರ ರಾತ್ರಿ ಸುರಿದ ಮಳೆಗೆ ಗೌಡೂರು, ಹೊಸಗುಡ್ಡ ಗ್ರಾಮದ ಹಳ್ಳಗಳು ತುಂಬಿ ಹರಿದಿದ್ದು, ಮೂರು ಮನೆಗಳು ಕುಸಿದಿವೆ.

ಗೌಡೂರು ಗ್ರಾಮದ ಚನ್ನಪ್ಪ ಬೈನಾರ್, ಅಮರೇಶ‌ ಗ್ಯಾರೇಜ್, ಅಮರೇಶ‌ ಮಾನ್ವಿ ಅವರ ಮನೆಯೊಳಗೆ‌ ಮಳೆ ನೀರು ನುಗ್ಗಿ ಮನೆಯಲ್ಲಿ ಸಂಗ್ರಹಿಸಿ ಇಟ್ಟ ದವಸ–ಧಾನ್ಯಗಳು ನನೆದು ಹಾಳಾಗಿವೆ.

‘ಸಮಸ್ಯೆ ಬಗ್ಗೆ ಕಂದಾಯ ಅಧಿಕಾರಿಗಳ ಗಮನಕ್ಕೆ ತಂದರೆ ನಾಳೆ ಬರುತ್ತವೆ ಎಂದು ಉಡಾಫೆ ಉತ್ತರ ನೀಡುತ್ತಾರೆ. ನಮ್ಮ ಗೋಳು ಕೇಳುವವರೆ ಇಲ್ಲದಂತಾಗಿದೆ’ ಎಂದು ಹೊಸಗುಡ್ಡ ಗ್ರಾಮದ ನಿವಾಸಿಗಳಾದ ಬಸಮ್ಮ, ಹನುಮಗೌಡ ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಹೊಸಗುಡ್ಡ ಹಳ್ಳ ಮತ್ತು ಬಂಡೆಭಾವಿ ಗ್ರಾಮದ ಹತ್ತಿರ ಇರುವ ಜಟ್ಟಿರ ಹಳ್ಳ ತುಂಬಿ ಹರಿದ ಪರಿಣಾಮ ರಸ್ತೆ ಸಂಪರ್ಕ ಕಡಿತವಾಗಿ ಜನರು ಪರದಾಡಿದರು. ಜನರು ಗೌಡೂರು ಗ್ರಾಮದ ಮೂಲಕ ತೆರಳಿದರು.

ಬಂಡೆಭಾವಿ ಗ್ರಾಮದ ಹತ್ತಿರ ಇರುವ ಜಟ್ಟೆರ ಹಳ್ಳ ತುಂಬಿ ಹರಿಯುವಾಗ ಶಿಕ್ಷಕ ಆದಪ್ಪ, ರಮೇಶ ಹಳ್ಳದಾಟಿ ಸರ್ಕಾರಿ ಶಾಲೆಗೆ‌ ಪಾಠ ಮಾಡಲು ತೆರಳಿದರು.

ಬೆಳೆ ಹಾನಿ: ಸತತವಾಗಿ ಸುರಿಯುತ್ತಿರುವ ಮಳೆ ಆರ್ಭಟಕ್ಕೆ ರೈತರು ಬೆಳೆದ ಸಜ್ಜೆ, ತೊಗರಿ,‌ ಹತ್ತಿ, ಎಳ್ಳು, ಸೂರ್ಯಕಾಂತಿ ಬೆಳೆಗಳು ಕೊಳೆತು ನಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರ ರೈತರ ನೆರವಿಗೆ ಧಾವಿಸಿ ಬೆಳೆ ಪರಿಹಾರ ಒದಗಿಸಬೇಕು ಎಂದು ರಾಜ್ಯ ರೈತ ಸಂಘ ಹಸಿರು ಸೇನೆ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಬಸವರಾಜು ಒತ್ತಾಯಿಸಿದ್ದಾರೆ.

ಹೊಸಗುಡ್ಡ ಗ್ರಾಮದಲ್ಲಿ ಕಂಭದ್ರೋಣ ಮಳೆಗೆ ಕುಸಿದು ಬಿದ್ದಿದೆ
ಬಂಡೆಭಾವಿ ಗ್ರಾಮದ ಜಂಟಿರ ಹಳ್ಳ ತುಂಬಿ ಹರಿಯುವಾಗ ಬೈಕ್‌ನಲ್ಲಿ ರಸ್ತೆ ದಾಟಿದ ಶಿಕ್ಷಕ ಆದಪ್ಪ ರಮೇಶ ಹಳ್ಖದಾಟಿ ಸರ್ಕಾರಿ ಶಾಲೆಗೆ‌ ಪಾಠ ಹೇಳಲು ತೆರಳಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.