ADVERTISEMENT

ರಾಯಚೂರು: ಮಳೆಗೆ ಕೊಚ್ಚಿಹೋದ ಸೇತುವೆ

​ಪ್ರಜಾವಾಣಿ ವಾರ್ತೆ
Published 28 ಜೂನ್ 2020, 8:22 IST
Last Updated 28 ಜೂನ್ 2020, 8:22 IST
ಶನಿವಾರ ರಾತ್ರಿ ಸುರಿದ ಮಳೆಯಿಂದಾಗಿ ಕೊಚ್ಚಿಹೋದ ಸೇತುವೆ
ಶನಿವಾರ ರಾತ್ರಿ ಸುರಿದ ಮಳೆಯಿಂದಾಗಿ ಕೊಚ್ಚಿಹೋದ ಸೇತುವೆ   
""

ರಾಯಚೂರು: ತಾಲ್ಲೂಕಿನಲ್ಲಿ ಶನಿವಾರ ರಾತ್ರಿ ಸುರಿದ ಮಳೆಯಿಂದ ಇಡಪನೂರು ಗ್ರಾಮಕ್ಕೆ ಸಂಪರ್ಕಿಸುವ ಮಾರ್ಗದಲ್ಲಿ ಹಳ್ಳದ ಸೇತುವೆ ಕೊಚ್ಚಿಹೋಗಿದೆ.

ಅರ್ಧಭಾಗ ಸೇತುವೆ ಕೊಚ್ಚಿ ಹೋಗಿದ್ದರಿಂದ ನಾಲ್ಕು ಚಕ್ರದ ವಾಹನಗಳು ಸಂಚರಿಸುವುದು ಸ್ಥಗಿತವಾಗಿದೆ. ಬೈಕ್‌ ಸವಾರರು ಮಾತ್ರ ಸಂಚರಿಸುತ್ತಿದ್ದಾರೆ.

ದೇವಸುಗೂರು, ಚಂದ್ರಬಂಡಾ, ಯರಗೇರಾ ಹೋಬಳಿಗಳಲ್ಲಿ ಹೆಚ್ಚು ಮಳೆ ಸುರಿದಿದೆ. ದೇವಸುಗೂರಿನಲ್ಲಿ ಕೆಲವು ಮನೆಗಳಿಗೆ ನೀರು ನುಗ್ಗಿದೆ. ಶಕ್ತಿನಗರದಿಂದ ಕಾಡ್ಲೂರು ಮಾರ್ಗದಲ್ಲಿರುವ ರೈಲ್ವೆ ಕೆಳಸೇತುವೆಯಲ್ಲಿ ಭಾರಿ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದ್ದು, ಬೈಕ್‌ ಸವಾರರು ನೀರಿನಲ್ಲಿಯೇ ತಳ್ಳಿಕೊಂಡು ಸಂಕಷ್ಟದಲ್ಲಿ ಬರುತ್ತಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.