ರಾಯಚೂರು: ಜಿಲ್ಲೆಯ ದೇವದುರ್ಗ ತಾಲ್ಲೂಕಿನ ವಿವಿಧ ತಾಂಡಾಗಳಿಂದ ಮುಂಬೈ ಹಾಗೂ ಪುನಾ ಮಹಾನಗರಗಳಿಗೆ ಕೆಲಸಕ್ಕಾಗಿ ಗುಳೆ ಹೋಗಿದ್ದ ಜನರು ಶನಿವಾರ ಮರಳಿ ಬಂದಿದ್ದು, ಮಾಹಿತಿ ತಿಳಿದು ಸ್ಥಳೀಯ ವೈದ್ಯಾಧಿಕಾರಿಗಳು ಒಟ್ಟು 118 ಜನರ ಆರೋಗ್ಯ ತಪಾಸಣೆ ಮಾಡಿದರು.
ಮನೆಯಿಂದ ಹೊರಗೆ ಹೆಚ್ಚು ಕಾಲ ಇರಬಾರದು, ಸೀತ, ಕೆಮ್ಮು, ಜ್ವರ ಬಂದರೆ ಕೂಡಲೇ ಮಾಹಿತಿ ನೀಡುವಂತೆ ತಿಳಿವಳಿಕೆ ನೀಡಿದರು.
ದ್ಯಾಮ್ಲಾನಾಯಕ ತಾಂಡಾ 39, ಸವಳತಾಂಡಾ 40, ಕೆಂಪಮರಸತಾಂಡಾ 14, ಉಲ್ಕಬಂಡಿ 03, ಎ.ಜಿ.ಕಾಲೋನಿ 05, ಪಲಗುಡ್ಡ 03, ಆಕಳಕುಂಪಿ 03, ಆಲ್ಕೋಡ ತಾಂಡಾ 05, ಮೂಕ್ಕಲಗುಡ್ಡ ತಾಂಡಾ 01, ಮಲ್ಲಾಪೂರ 05 ಜನರು ಮರಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.