ADVERTISEMENT

ರಾಯಚೂರು: ಚಾಲಕನ ಸಮಯ ಪ್ರಜ್ಞೆ, 60 ಜನರು ಸುರಕ್ಷಿತ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2021, 11:50 IST
Last Updated 3 ಫೆಬ್ರುವರಿ 2021, 11:50 IST
 ಚಾಲಕನ ಸಮಯ ಪ್ರಜ್ಞೆಯಿಂದಾಗಿ ಬ್ರೇಕ್ ಫೇಲ್ ಆಗಿರುವ ಸರ್ಕಾರಿ ಬಸ್ಸನ್ನು ರಸ್ತೆ ಪಕ್ಕದಲ್ಲಿ ನಿಲ್ಲಿಸಲಾಗಿದೆ.
ಚಾಲಕನ ಸಮಯ ಪ್ರಜ್ಞೆಯಿಂದಾಗಿ ಬ್ರೇಕ್ ಫೇಲ್ ಆಗಿರುವ ಸರ್ಕಾರಿ ಬಸ್ಸನ್ನು ರಸ್ತೆ ಪಕ್ಕದಲ್ಲಿ ನಿಲ್ಲಿಸಲಾಗಿದೆ.    

ರಾಯಚೂರು: ಇದ್ದಕ್ಕಿದ್ದಂತೆ ಬ್ರೇಕ್ ಫೇಲ್ ಆಗಿ ಸರ್ಕಾರಿ ಬಸ್ ರಸ್ತೆ ಬಿಟ್ಟರೂ ಯಾವುದೇ ಅನಾಹುತ ಸಂಭವಿಸದೆ, ಚಾಲಕನ ಸಮಯ ಪ್ರಜ್ಞೆಯಿಂದಾಗಿ 60 ಜನರು ಬದುಕುಳಿದ ಘಟನೆ ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಬುದ್ದಿನ್ನಿ‌ ಗ್ರಾಮದ ಬಳಿ ಬುಧವಾರ ನಡೆದಿದೆ.

ಬಾಗಲಕೊಟೆಯಿಂದ ರಾಯಚೂರಿಗೆ ಬಸ್ ಬರುತ್ತಿತ್ತು. ಬಸ್ ವೇಗದಲ್ಲಿದ್ದರೂ ಬ್ರೇಕ್ ಫೇಲ್ ಆಗಿದ್ದನ್ನು ಅರಿತ ಚಾಲಕ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾನೆ. ರಸ್ತೆ ಪಕ್ಕದ ಇಳಿಜಾರಿನಲ್ಲಿ ಬಸ್ ನಿಲುಗಡೆ ಆಗಿದೆ. ಯಾವುದೇ ಜೀವ ಹಾನಿ, ಗಾಯಗಳಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT