ADVERTISEMENT

ಲಿಂಗಸುಗೂರು: ಸಿಡಿಲು ಬಡಿದು ಯುವಕ ಸಾವು

​ಪ್ರಜಾವಾಣಿ ವಾರ್ತೆ
Published 1 ಜೂನ್ 2023, 15:27 IST
Last Updated 1 ಜೂನ್ 2023, 15:27 IST
ನೂರ್ ಅಹ್ಮದ
ನೂರ್ ಅಹ್ಮದ   

ಲಿಂಗಸುಗೂರು: ತಾಲ್ಲೂಕಿನ ಬೆಂಡೋಣಿ ಗ್ರಾಮದ ಹೊರವಲಯದ ಜಮೀನದಲ್ಲಿ ಗುರುವಾರ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ನೂರ್ ಅಹ್ಮದ ರಾಜಾಸಾಬ್‌ (23) ಸಿಡಿಲು ಬಡಿದು ಮೃತಪಟ್ಟ ಘಟನೆ ಜರುಗಿದೆ.

ಸಂಜೆ ವೇಳೆ ಭಾರಿ ಗಾಳಿ ಮಧ್ಯೆ ಗುಡಗು ಸಿಡಿಲು ಅರ್ಭಟ ವೇಳೆ ಈ ಘಟನೆ ಜರುಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದು ಚಿಕಿತ್ಸೆ ಕೊಡಿಸಲು ಪ್ರಯತ್ನಿಸಿದರು ಫಲಕಾರಿ ಆಗಲಿಲ್ಲ ಎಂದು ಹೇಳಿದರು.

ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ತಹಶೀಲ್ದಾರ ಡಿ.ಎಸ್ ಜಮಾದಾರ, ಕಂದಾಯ ನಿರೀಕ್ಷಕ ರಾಮಕೃಷ್ಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.