ADVERTISEMENT

ರಾಯಚೂರು: ನಗರಸಭೆ ಸದಸ್ಯ ಮಕ್ಬೂಲ್‌ ಕೊಲೆ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2020, 3:59 IST
Last Updated 29 ಸೆಪ್ಟೆಂಬರ್ 2020, 3:59 IST
ಮಕ್ಬೂಲ್
ಮಕ್ಬೂಲ್   

ರಾಯಚೂರು: ನಗರದ ವಾರ್ಡ್ ಸಂಖ್ಯೆ 8ರಿಂದ ನಗರಸಭೆಗೆ ಆಯ್ಕೆಯಾಗಿದ್ದ ಮಕ್ಬೂಲ್ (50) ಅವರನ್ನು ಸೋಮವಾರ ತಡರಾತ್ರಿ ಮಚ್ಚಿನಿಂದ ಕೊಚ್ಚಿ ಮಾಡಲಾಗಿದೆ.

ಜಾಕೀರ್ ಹುಸೇನ್ ವೃತ್ತದಲ್ಲಿ ಘಟನೆ ನಡೆದಿದ್ದು, ತೀವ್ರ ಗಾಯಗೊಂಡು ಬಿದ್ದಿದ್ದ ಮಕ್ಬೂಲ್ ಅವರನ್ನು ರಿಮ್ಸ್ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಕೂಡಲೇ ಮೃತಪಟ್ಟಿದ್ದಾರೆ‌.

ಮುಖ ಮರೆಮಾಡಿಕೊಂಡು ಬೈಕ್ ಮೇಲೆ‌ ಬಂದಿದ್ದ ಅಪರಚಿತ ಯುವಕರ ಗುಂಪು ಹತ್ಯೆ ನಡೆಸಿ ಪರಾರಿಯಾಗಿದೆ. ಸದರ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್‌ನಿಕ್ಕಂ ಅವರು ಅಪರಾಧಿಗಳ ಪತ್ತೆಗೆ ತಂಡ ರಚಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.