ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಸನ್ನಿಧಾನಕ್ಕೆ ಭಕ್ತರು ಆಗಮಿಸಲು ಅನಾನುಕೂಲ ಇರುವುದರಿಂದ ಭಕ್ತಾದಿಗಳ ಅಪೇಕ್ಷೆಯಂತೆ ಆನ್ಲೈನ್ನಲ್ಲಿ ಕೆಲವು ಹೊಸ ಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಮಠದ ಆಡಳಿತವು ತಿಳಿಸಿದೆ.
ಭಕ್ತರು ಆನ್ಲೈನ್ ಮುಖಾಂತರವಾಗಿಯೇ ಪಂಚಾಮೃತ ಅಭಿಷೇಕ, ತುಳಸಿ ಅರ್ಚನೆ, ಉತ್ಸವ ರಾಯರ ಪಾದಪೂಜೆ, ಹಸ್ತೋದಕ, ಪಲ್ಲಕ್ಕಿ ಸೇವೆ, ಉಂಜಲ ಸೇವೆ, ಧನ್ವಂತರಿ ಹೋಂ, ಮೃತ್ಯುಂಜಯ ಹೋಂ ಸೇರಿ ಹಲವು ಸೇವೆಗಳನ್ನು ಸಲ್ಲಿಸಬಹುದಾಗಿದೆ.
ಸೇವಾ ಕಾಣಿಕೆ ಹಾಗೂ ವಿವರಗಳನ್ನು ಕಳುಹಿಸಿದರೆ, ಅವರ ಹೆಸರಿನಲ್ಲಿ ಈ ಸೇವೆಗಳನ್ನು ಸನ್ನಿಧಾನದಲ್ಲಿ ನೆರವೇರಿಸಲಾಗುವುದು. ಆನ್ಲೈನ್ ಮುಖಾಂತರ ಸೇವೆಗಳನ್ನು ಶ್ರೀ ಗುರು ರಾಘವೇಂದ್ರ ಸ್ವಾಮಿಗಳಿಗೆ ಸಲ್ಲಿಸಬಹುದು ಎಂದು ತಿಳಿಸಲಾಗಿದೆ.
ಅಂತರ್ಜಾಲ ವಿವರ: www.srsmatha.org/online
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.