ADVERTISEMENT

‘25 ರಂದು ಶಕ್ತಿನಗರ ಬಂದ್’

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2019, 12:24 IST
Last Updated 23 ನವೆಂಬರ್ 2019, 12:24 IST

ರಾಯಚೂರು: ಶಕ್ತಿನಗರದ ಶಾಖೋತ್ಪನ್ನ ವಿದ್ಯುತ್ ಕೇಂದ್ರದಿಂದ ವಾಯುಮಾಲಿನ್ಯ ಮತ್ತು ಜಲಮಾಲಿನ್ಯ ಉಂಟಾಗುತ್ತಿದ್ದು ಶಕ್ತಿನಗರ ಉಳಿಸಿ ಹೋರಾಟ ಸಮಿತಿ ವತಿಯಿಂದ ನವೆಂಬರ್‌ 25 ರಂದು ಒಂದು ದಿನ ಶಕ್ತಿನಗರ ಬಂದ್‌ಗೆ ಕರೆ ನೀಡಲಾಗಿದೆಎಂದು ಸಂಘದ ಅಧ್ಯಕ್ಷ ಧರ್ಮರಾಜ್ ತಿಳಿಸಿದರು.

ಶಕ್ತಿನಗರದ ಶಾಖೋತ್ಪನ್ನ ಕೇಂದ್ರದಿಂದ ಹೊರಸೂಸುವ ಹಾರುಬೂದಿ, ತಳಬೂದಿ, ಹಾಗೂ ಬೂದಿ ಹೊತ್ತೊಯ್ಯುವ ವಾಹನಗಳಿಂದ ವಾಯು ಮಾಲಿನ್ಯ ಉಂಟಾಗಿ ಪಿ.ಎಂ 2.5 ಸೂಕ್ಷ್ಮ ಧೂಳಿನ ಕಣಗಳು ಮಿತಿ ಮೀರಿದೆ. 20 ಕಿಲೋ ಮೀಟರ್‌ ವ್ಯಾಪ್ತಿಯಲ್ಲಿನ ಜನರ ಆರೋಗ್ಯ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಅದಕ್ಕೆ, ವಾಯು ಮಾಲಿನ್ಯ ತಪಾಸಣಾ ಉಪಕರಣಗಳಿಂದ ಪರೀಕ್ಷೆ ಮಾಡಿಸಿ ಕಂಪನಿಯ ವಿರುದ್ಧ ಹಾಗೂ ಎಂ.ಡಿ,ಇಡಿ ವರ್ಗಾವಣೆಗೆ ಒತ್ತಾಯಿಸಿ ಬಂದ್‌ಗೆ ಕರೆ ನೀಡಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT