
ಮುದಗಲ್: ‘ವಿಶ್ವಕರ್ಮ ಸಮುದಾಯದವರು ರಾಜಕೀಯ ಪ್ರಜ್ಞೆ ಬೆಳಸಿಕೊಳ್ಳಬೇಕು’ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ರಾಜ್ಯಾಧ್ಯಕ್ಷ ಕೆ.ಪಿ.ನಂಜುಂಡಿ ಹೇಳಿದರು.
ಪಟ್ಟಣದ ಕಿಲ್ಲಾದ ರಾಮಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಕಾಳಿಕಾದೇವಿ ಮೂರ್ತಿ ಪುನರ್ ಪ್ರತಿಷ್ಠಾಪನೆ, ನೂತನ ದೇವಾಲಯದ ಲೋಕಾರ್ಪಣೆ ಸಮಾರಂಭದ ಧಾರ್ಮಿಕ ಸಭೆ ಉದ್ಘಾಟಿಸಿ ಮಾತನಾಡಿದರು.
‘ವಿಶ್ವಕರ್ಮ ಸಮಾಜಕ್ಕೆ ತನ್ನದೇ ಆದ ವಿಶೇಷ ಶಕ್ತಿ ಇದೆ. ಹುಟ್ಟುವಾಗಲೇ ವಿಶ್ವಕರ್ಮರು ಎಂಜಿನಿಯರ್ಗಳಾಗಿ ಜನಿಸುತ್ತೇವೆ. ಸಮಾಜದವರು ಒಗ್ಗಟ್ಟಿನಿಂದ ಸಂಘಟಿತರಾಗಬೇಕು’ ಎಂದು ಹೇಳಿದರು.
ಮೌನೇಶ್ವರ ಸ್ವಾಮೀಜಿ, ಅಜ್ಜೇಂದ್ರ ಸ್ವಾಮೀಜಿ, ಲೇಬಗೇರಿ ಮಠದ ನಾಗಮೂರ್ತೇಂದ್ರ ಸ್ವಾಮೀಜಿ, ಅಂಕಲಿಮಠದ ಶ್ರೀಗಳು, ಉಪ್ಪಾರ ನಂದಿಹಾಳದ ಜಯೇಂದ್ರ ತಾತ, ಮಾಜಿ ಶಾಸಕ ಡಿ.ಎಸ್.ಹೂಲಗೇರಿ, ನಾಗಲಾಪುರ ವಿಎಸ್ಎಸ್ಎನ್ ಅಧ್ಯಕ್ಷ ಶರಣಬಸವರಾಜ ಪಾಟೀಲ ವ್ಯಾಕರನಾಳ, ರಾಯಚೂರು ಜಿಲ್ಲಾ ವಿಶ್ವಕರ್ಮ ನೌಕರರ ಸಂಘದ ಅಧ್ಯಕ್ಷ ಮನೋಹರ ಪತ್ತಾರ, ವಿಶ್ವಕರ್ಮ ಸಮಾಜದ ಅಧ್ಯಕ್ಷ ನಾರಾಯಣಪ್ಪ ಪತ್ತಾರ, ಉಪಾಧ್ಯಕ್ಷ ಪ್ರಭಾಕರ ಪತ್ತಾರ, ದೇವಸ್ಥಾನ ಸಮಿತಿ ಅಧ್ಯಕ್ಷ ಶ್ರೀಧರ ಪತ್ತಾರ, ಉಪಾಧ್ಯಕ್ಷ ನೀಲಪ್ಪ ಕಂಬಾರ, ಉದಯಕುಮಾರ, ಗುಂಡಣ್ಣ ಲಿಂಗಸುಗೂರು, ಅಂಬಣ್ಣ ಸಾಹುಕಾರ ಮಾನವಿ, ವೀರೇಶ ದೇವರಗುಡಿ, ಸೋಮಣ್ಣ ಸುಕಾಲಪೇಟಿ, ವೈಜನಾಥ ಕವಿತಾಳ ಹಾಗೂ ರಾಮು ಗಾಣದಾಳ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.