ADVERTISEMENT

ಮಕ್ಕಳ ‘ಸಡಗರದ ಹಬ್ಬ’

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2014, 11:05 IST
Last Updated 18 ಮಾರ್ಚ್ 2014, 11:05 IST

ಕನಕಪುರ:   ಪಟ್ಟಣದ ರೂರಲ್ ವಿದ್ಯಾ­ಸಂಸ್ಥೆಯ ದಯಾನಂದ ವಸತಿ ಶಾಲೆ­­ಯಲ್ಲಿ ವಾರ್ಷಿಕೋತ್ಸವದ ಅಂಗ­ವಾಗಿ ಮಕ್ಕಳ ಸಡಗರದ ಹಬ್ಬ ಕಾರ್ಯ­ಕ್ರಮ ನಡೆಯಿತು.

ಪುಟಾಣಿ ಮಕ್ಕಳು ವಿವಿಧ ರೀತಿಯ ಕಾರ್ಯಕ್ರಮಗಳನ್ನು ಪ್ರದರ್ಶನ ಮಾಡುವ ಮೂಲಕ ತಮ್ಮ ಪ್ರತಿಭೆಗಳನ್ನು ಅನಾವರಣ­ಗೊಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆರ್.ಇ.ಎಸ್.ನ ಉಪಾಧ್ಯಕ್ಷ ಲಕ್ಷ್ಮಣ್ ಮಾತನಾಡಿ, ‘ಮಕ್ಕಳಲ್ಲಿ ಅಗಾಧ ಪ್ರತಿಭೆಯನ್ನು ಗುರುತಿಸಿ ಶಿಕ್ಷಕರು ಉತ್ತೇಜನ ನೀಡಿದ್ದರ ಫಲವಾಗಿ ಇಂದು ವೇದಿಕೆ ಮೇಲೆ ಅಚ್ಚರಿಗೊಳ್ಳುವಂತಾ­ಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ­ದರು.

ಆರ್.ಇ.ಎಸ್. ಅಧ್ಯಕ್ಷ ಕೆ.ಜಿ.­ತಿಮ್ಮಪ್ಪ ಮಾತನಾಡಿದರು. ಕಾರ್ಯ­ದರ್ಶಿ ಸಿ.ರಮೇಶ್, ಡಿ.ವಿ.ವಿ. ಶಿಕ್ಷಕರು ಮತ್ತು ಸಿಬ್ಬಂದಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.