ADVERTISEMENT

ಅಪಘಾತ; ಮೂವರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 30 ಜೂನ್ 2019, 14:22 IST
Last Updated 30 ಜೂನ್ 2019, 14:22 IST
ಮಾಗಡಿ ಎನ್ಇಎಸ್‌ ಸರ್ಕಲ್‌ನಲ್ಲಿ ಮಾರುತಿ ವ್ಯಾನ್‌ಗೆ ಹಿಂಬದಿಯಿಂದ ಬೋಲೇರೋ ಜೀಪ್‌ ಗುದ್ದಿರುವುದು.
ಮಾಗಡಿ ಎನ್ಇಎಸ್‌ ಸರ್ಕಲ್‌ನಲ್ಲಿ ಮಾರುತಿ ವ್ಯಾನ್‌ಗೆ ಹಿಂಬದಿಯಿಂದ ಬೋಲೇರೋ ಜೀಪ್‌ ಗುದ್ದಿರುವುದು.   

ಮಾಗಡಿ: ಪಟ್ಟಣದ ಎನ್‌ಇಎಸ್‌ ಸರ್ಕಲ್‌ ಬಳಿ ಮಾರುತಿ ವ್ಯಾನ್‌ ಮತ್ತು ಬೊಲೆರೊ ವಾಹನದ ನಡುವೆ ಅಪಘಾತ ಸಂಭವಿಸಿ ವ್ಯಾನ್‌ನಲ್ಲಿದ್ದ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಶಿವಪ್ಪ(50), ಶಶಿಕಲಾ(45), ಪ್ರಮೀಳಾ(40)ಗಾಯಾಳುಗಳು. ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ತಿರುಮಲೆ ರಂಗನಾಥಸ್ವಾಮಿ ದರ್ಶನಕ್ಕೆ ತೆರಳುತ್ತಿದ್ದರು. ಘಟನೆಯಿಂದ ವ್ಯಾನ್‌ ಸರ್ಕಲ್‌ನಲ್ಲಿ ಇರುವ ಗಾಂಧೀಜಿ ಪುತ್ಥಳಿಯ ಪೀಠಕ್ಕೆ ಹಾನಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT