ADVERTISEMENT

ರಾಮನಗರ: ಕಟ್ಟಡದ ಮೇಲಿಂದ ಬಿದ್ದು ಬಾಲಕ ಸಾವು

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2021, 5:55 IST
Last Updated 20 ಸೆಪ್ಟೆಂಬರ್ 2021, 5:55 IST
ಅನಿಲ್
ಅನಿಲ್    

ಮಾಗಡಿ: ಪಟ್ಟಣದ ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಭಾನುವಾರ ನಿರ್ಮಾಣ ಹಂತದ ಕಟ್ಟಡದಿಂದ ಕೆಳಗೆ ಬಿದ್ದು ಅನಿಲ್ (16) ಎಂಬ ಕಾರ್ಮಿಕ ಮೃತಪಟ್ಟಿದ್ದಾನೆ.

ಈತ ಯಾದಗಿರಿ ಮೂಲದ ನಾಗೇಶ್‌ ಮತ್ತು ಲಕ್ಷ್ಮೀ ದಂಪತಿಯ ಪುತ್ರ. ಈತ ಎಸ್‌ಎಸ್‌ಎಲ್‌ಸಿ ಓದುತ್ತಿದ್ದ. ತಂದೆಯೊಂದಿಗೆ ವೆಂಕಟೇಶ್‌ ಮಾಲೀಕತ್ವದ ಕಟ್ಟಡದಲ್ಲಿ ಫ್ಲಂಬಿಂಗ್‌ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

‘ಮೂರನೇ ಮಹಡಿಯಿಂದ ಕೆಳಗೆ ಬಿದ್ದಿದ್ದಾನೆ. ನಾನು ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದೆ. ಮೆಟ್ಟಿಲು ಇಳಿದು ಬಂದು ನೋಡಿದಾಗ ಮೂಗು, ಕಿವಿಯಲ್ಲಿ ರಕ್ತ ಹರಿದಿತ್ತು. ನನ್ನತ್ತ ನೋಡಿ ಕಣ್ಣು ಮುಚ್ಚಿಕೊಂಡ. ಎಡಗಾಲು ತುಂಡಾಗಿತ್ತು. ಫ್ಲಂಬಿಂಗ್‌ ಏಜೆಂಟ್‌ ಭೈರಪ್ಪ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿಕೊಂಡಿದ್ದಾರೆ’ ಎಂದು ಮೃತನ ತಂದೆ ತಿಳಿಸಿದರು.

ADVERTISEMENT

ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಮೃತನ ಶವ ಇಡಲಾಗಿದೆ. ಈ ಸಂಬಂಧ ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.