ಮಾಗಡಿ: ತಾಲ್ಲೂಕಿನ ಚಕ್ರಬಾವಿ ಗ್ರಾಮದ ಪುನೀತ್ ರಾಜ್ಕುಮಾರ್ ಅಭಿಮಾನಿಗಳು ಪುನೀತ್ ಅವರ ನೆನಪಿನಲ್ಲಿ ಮಲೆಮಹದೇಶ್ವರ ಬೆಟ್ಟದಿಂದ ನಾಗಮಲೆ ಬೆಟ್ಟಕ್ಕೆ 18 ಕಿ.ಮೀ ಪಾದಯಾತ್ರೆ ಕೈಗೊಂಡರು.
ಪುನೀತ್ ಅಭಿಮಾನಿ ಸೀಮೆಣ್ಣೆ ರಾಜಣ್ಣ ಹಾಗೂ ಗ್ರಾಮದ ಯುವಕರು ಪುನೀತ್ ಅವರ ಭಾವಚಿತ್ರ ಹಾಕಿಕೊಂಡು ಅವರ ಆತ್ಮಕ್ಕೆ ಶಾಂಯಿ ಸಿಗಲೆಂದು ಪಾದಯಾತ್ರೆ ಕೈಗೊಂಡು ಪ್ರಾರ್ಥಿಸಿದರು. ‘ಅವರು ಮಾಡಿರುವ ಅಪಾರ ಜನಪರ ಸೇವೆ ಎಲ್ಲರಿಗೂ ಮಾದರಿಯಾಗಿದೆ. ಅವರ ಸ್ಮರಣೆಯೊಂದಿಗೆ ನಾಗಮಲೆ ಮಾದಪ್ಪನಿಗೆ ವಿಶೇಷ ಅಭಿಷೇಕ, ಪೂಜೆ ಸಲ್ಲಿಸಿದೆವು’ ಎಂದು ರಾಜಣ್ಣ ತಿಳಿಸಿದರು.
ಪುನೀತ್ ಅಭಿಮಾನಿಗಳಾದ ಮಲ್ಲನಪಾಳ್ಯ ನಾಗೇಶ್. ಲೋಕೇಶ್, ಸತೀಶ್, ಪ್ರಕಾಶ್ ಮತ್ತಿತರರು ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.