ADVERTISEMENT

ಬೆಳಗುಂಬ ವಿಎಸ್ಎಸ್ಎನ್ ಜೆಡಿಎಸ್ ತೆಕ್ಕೆಗೆ

​ಪ್ರಜಾವಾಣಿ ವಾರ್ತೆ
Published 21 ಜುಲೈ 2025, 2:32 IST
Last Updated 21 ಜುಲೈ 2025, 2:32 IST
ಮಾಗಡಿ ಪಟ್ಟಣದ ಕಲ್ಯಾಗೇಟ್ ವಿನಾಯಕ ಸ್ವಾಮಿ ದೇವಸ್ಥಾನದ ಬಳಿ ಬೆಳಗುಂಬ ಸಹಕಾರಿ ಸಂಘದ ಜೆಡಿಎಸ್ ಬೆಂಬಲಿತ ನೂತನ ನಿರ್ದೇಶಕರು ಸಂಭ್ರಮಿಸಿದರು
ಮಾಗಡಿ ಪಟ್ಟಣದ ಕಲ್ಯಾಗೇಟ್ ವಿನಾಯಕ ಸ್ವಾಮಿ ದೇವಸ್ಥಾನದ ಬಳಿ ಬೆಳಗುಂಬ ಸಹಕಾರಿ ಸಂಘದ ಜೆಡಿಎಸ್ ಬೆಂಬಲಿತ ನೂತನ ನಿರ್ದೇಶಕರು ಸಂಭ್ರಮಿಸಿದರು   

ಮಾಗಡಿ: ತಾಲ್ಲೂಕಿನ ಬೆಳಗುಂಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರ ಆಯ್ಕೆಗೆ ಭಾನುವಾರ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತರು ಮೇಲುಗೈ ಸಾಧಿಸಿದ್ದಾರೆ.

ಬೆಳಗುಂಬ ಸರ್ಕಾರಿ ಶಾಲಾ ಆವರಣದಲ್ಲಿ ನಡೆದ ಚುನಾವಣೆಯಲ್ಲಿ ಒಟ್ಟು 11 ನಿರ್ದೇಶಕರ ಸ್ಥಾನದಲ್ಲಿ ಜೆಡಿಎಸ್ ಬೆಂಬಲಿತ 9 ನಿರ್ದೇಶಕರು ವಿಜೇತರಾಗಿದ್ದಾರೆ.

ನೂತನ ನಿರ್ದೇಶಕರು: ಹೊಸಹಳ್ಳಿ ಎಚ್.ಎಂ.ರಂಗನಾಥ್ (ರಂಗಣಿ), ನರಸೇಗೌಡ, ಬಿ.ಎಸ್.ಮಂಜುನಾಥ್, ಬಿ.ರಾಜಣ್ಣ, ಗೌರಮ್ಮ ಸೂರಪ್ಪ, ಬಿ.ವಿ.ಗಂಗನರಸಿಂಹಯ್ಯ, ರೇಣುಕಯ್ಯ, ಬಿ.ಎಸ್.ಚಂದ್ರಶೇಖರ, ಪುಷ್ಪ, ಗೋಪಾಲ್ ನೂತನ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಉಮೇಶ್ ತಿಳಿಸಿದ್ದಾರೆ.

ADVERTISEMENT

ಜೆಡಿಎಸ್ ಬೆಂಬಲಿತ ನಿರ್ದೇಶಕರು ಆಯ್ಕೆಯಾಗುತ್ತಿದ್ದಂತೆ ಪಕ್ಷದ ಮುಖಂಡರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಜೊತೆಗೆ ಕಲ್ಯಾಗೇಟ್ ವಿನಾಯಕ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. 

ಈ ವೇಳೆ ಜೆಡಿಎಸ್ ಮುಖಂಡರಾದ ಕೋಟಪ್ಪ, ಹೊನ್ನಪ್ಪ, ಸೂರಪ್ಪ, ನಾಗಣ್ಣ, ವಿಜಯಕುಮಾರ್, ದಂಡಿಗೆಪುರ ಕುಮಾರ್, ಭರತ್, ತಗ್ಗಿಕುಪ್ಪೆ ಪಂಚೆ ರಾಮಣ್ಣ, ಗೌಡ್ರುಪಾಳ್ಯ ಶಿವರಾಂ, ಮಂಜುನಾಥ್, ವಿಶ್ವನಾಥ್ ಸೇರಿದಂತೆ ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.